ಕಾಸರಗೋಡು ; ಕೊರೋನ ಭೀತಿ : ಅ. 23ರವರೆಗೆ ನಿಷೇಧಾಜ್ಞೆ
ಕಾಸರಗೋಡು : ಜಿಲ್ಲೆಯಲ್ಲಿ ಜಾರಿಗೊಳಿಸಿರುವ 144 ನಿಷೇಧಾಜ್ಞೆಯನ್ನು ಅ. 23 ತನಕ ವಿಸ್ತರಿಸಿ ಜಿಲ್ಲಾಧಿಕಾರಿ ಡಿ . ಸಜಿತ್ ಬಾಬು ಆದೇಶ ನೀಡಿದ್ದಾರೆ.
ಕೊರೋನ ಸೋಂಕು ಹರಡುತ್ತಿರುವ ಹಿನ್ನಲೆಯಲ್ಲಿ ಅ. 2 ರಿಂದ 16 ತನಕ ನಿಷೇಧಾಜ್ಞೆ ಯನ್ನು ಜಾರಿಗೆ ತರಲಾಗಿತ್ತು . ಇದೀಗ ಸೋಂಕು ನಿಯಂತ್ರಣಕ್ಕೆ ಬರದ ಹಿನ್ನಲೆಯಲ್ಲಿ ನಿಷೇಧಾಜ್ಞೆಯನ್ನು ವಿಸ್ತರಿದ್ದು , ಅ. 23 ರ ಮಧ್ಯರಾತ್ರಿ 12 ಗಂಟೆ ತನಕ ಜಾರಿಯಲ್ಲಿರಲಿದೆ.
ಮಂಜೇಶ್ವರ , ಕುಂಬಳೆ , ಬದಿಯಡ್ಕ , ಕಾಸರಗೋಡು , ವಿದ್ಯಾನಗರ , ಮೇಲ್ಪರಂಬ , ಬೇಕಲ , ಹೊಸದುರ್ಗ , ನೀಲೇಶ್ವರ , ಚಂದೇರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯಾರಪ್ಪ ಪರಪ್ಪ , ಒಡೆಯಂಚಾಲ್ , ಪನತ್ತಡಿ ಪೇಟೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ವಿಸ್ತರಿಸಲಾಗಿದೆ .
ಈ ಪ್ರದೇಶಗಳಲ್ಲಿ ಐದಕ್ಕಿಂತ ಅಧಿಕ ಮಂದಿ ಗುಂಪು ಗೂಡುವುದನ್ನು ನಿಷೇಧಿಸಲಾಗಿದೆ. ವಿವಾಹಕ್ಕೆ 50 ಮಂದಿ , ಮರಣಾ ನಂತರದ ಕಾರ್ಯಕ್ರಮಗಳಿಗೆ 20 ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ.
Next Story