ಕಾರು ಚಾಲಕ ಆತ್ಮಹತ್ಯೆ
ಬೈಂದೂರು, ಅ. 22: ಚಾಲಕರೊಬ್ಬರು ತನ್ನ ಕಾರಿನಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿರೂರು ಗ್ರಾಮದ ಸಾತನಗುಡ್ಡೆ ಎಂಬಲ್ಲಿ ಶಿರೂರು ತೂದಳ್ಳಿಗೆ ಹೋಗುವ ರಸ್ತೆಯಲ್ಲಿ ನಡೆದಿದೆ.
ಮೃತರನ್ನು ಬೈಂದೂರು ತಾರಾಪತಿ ನಿವಾಸಿ ಅಣ್ಣಪ್ಪಪೂಜಾರಿ ಎಂಬವರ ಮಗ ನಾಗರಾಜ (23) ಎಂದು ಗುರುತಿಸಲಾಗಿದೆ. ಇವರು ಅ.12ರಂದು ಧರ್ಮಸ್ಥಳ ಹಾಗೂ ಸುಬ್ರಹ್ಮಣ್ಯಕ್ಕೆ ಬಾಡಿಗೆಗೆ ಹೋಗುವುದಾಗಿ ಹೇಳಿ ಹೋಗಿ ದ್ದರು. ಅಲ್ಲಿಂದ ಬಂದ ಇವರು ಅ.15ರಂದು ಮಧ್ಯಾಹ್ನ ಶಿರೂರು ತೂದಳ್ಳಿಗೆ ಹೋಗುವ ರಸ್ತೆಯ ಬದಿಯಲ್ಲಿ ಕಾರು ನಿಲ್ಲಿಸಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖ ಲಾಗಿದೆ.
Next Story