ಅಗಲಿದ ಮಾರುತಿ ಮಾನ್ಪಡೆಗೆ ಶೃದ್ಧಾಂಜಲಿ ಸಭೆ
ಉಡುಪಿ, ಅ.21: ಅಗಲಿದ ಪಕ್ಷದ ಹಾಗೂ ರೈತ ಕಾರ್ಮಿಕ ಸಂಘದ ರಾಜ್ಯ ಸಮಿತಿ ಮುಖಂಡ ಮಾರುತಿ ಮಾನ್ಪಡೆ ಅವರಿಗೆ ಸಿಪಿಐಎಂ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಶೃದ್ಧಾಂಜಲಿ ಸಭೆಯನ್ನು ಇಂದು ಉಡುಪಿ ಪದ ಕಚೇರಿಯಲ್ಲಿ ಆಯೋಜಿಸಲಾಗಿತ್ತು.
ಸಿಪಿಎಂ ಪಕ್ಷದ ರಾಜ್ಯ ಉಪಾಧ್ಯಕ್ಷ ಕೆ.ಶಂಕರ್, ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ನುಡಿನಮನ ಸಲ್ಲಿಸಿದರು. ಪಕ್ಷದ ಜಿಲ್ಲಾ ಹಾಗೂ ಉಡುಪಿ ತಾಲೂಕು ಮುಖಂಡ ಶಶಿಧರ್ ಗೊಲ್ಲ, ಮಹಾಬಲ ವಡೇರ ಹೋಬಳಿ, ಉಮೇಶ್ ಕುಂದರ್, ಕವಿರಾಜ್ ಎಸ್., ಸುರೇಶ್ ಕಲ್ಲಾಗಾರ, ವೆಂಕಟೆಶ್ ಕೋಣಿ, ನಾಗರತ್ನ, ನಳಿನಿ, ಸರೋಜ, ಮೋಹನ ಹಾಗೂ ಪ್ರಗತಿಪರ ಚಿಂತಕ ಸಂಜೀವ ಬಳ್ಕೂರ್ ಉಪಸ್ಥಿತರಿದ್ದರು.
Next Story