ಅರಿಯಡ್ಕ: ಅ.28ರಂದು ನವೀಕೃತ ಮಸೀದಿ ಉದ್ಘಾಟನೆ
ಪುತ್ತೂರು, ಅ.27: ತಾಲೂಕಿನ ಅರಿಯಡ್ಕದ ನವೀಕೃತ ಜುಮಾ ಮಸೀದಿ ಅ.28ರಂದು ಉದ್ಘಾಟನೆಗೊಳ್ಳಲಿದೆ.
ಬುಧವಾರ ಅಸರ್ ನಮಾಝ್ ಬಳಿಕ ಪುತ್ತೂರು ಜುಮಾ ಮಸೀದಿ ಮುದರ್ರಿಸ್ ಅಸೈಯದ್ ಅಹ್ಮದ್ ಪೂಕೋಯ ತಂಙಳ್ ನವೀಕೃತ ಮಸೀದಿಯನ್ನು ಉದ್ಘಾಟಿಸುವರು. ಉಡುಪಿ-ಚಿಕ್ಕಮಗಳೂರು-ಹಾಸನ ಸಂಯುಕ್ತ ಖಾಝಿ ಅಬ್ದುಲ್ ಹಮೀದ್ ಮುಸ್ಲಿಯಾರ್ ವಕ್ಫ್ ನಿರ್ವಹಣೆ ಮಾಡುವರು.
ಬಳಿಕ ನಡೆಯುವ ಸಭಾ ಕಾರ್ಯಕ್ರಮವನ್ನು ಸಅದಿಯಾ ಅರೇಬಿಕ್ ಕಾಲೇಜಿನ ಪ್ರೊಫೆಸರ್ ಹುಸೈನ್ ಸಅದಿ ಕೆ.ಸಿ.ರೋಡ್ ಉದ್ಘಾಟಿಸಲಿದ್ದಾರೆ. ಸ್ಥಳೀಯ ಖತೀಬ್ ಅಬ್ದುಲ್ ಜಲೀಲ್ ಸಖಾಫಿ ಮುಖ್ಯ ಭಾಷಣ ಮಾಡುವರು. ಜಮಾಅತ್ ಕಮಿಟಿ ಅಧ್ಯಕ್ಷ ಅಬ್ದುರ್ರಹ್ಮಾನ್ ಹಾಜಿ ಅರಿಯಡ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ಸಮಾರಂಭದಲ್ಲಿ ಸುರಿಬೈಲು ದಾರುಲ್ ಅಶ್ಅರಿಯ್ಯ ಶರೀಅತ್ ಕಾಲೇಜಿನ ಮುದರ್ರಿಸ್ ಮಹ್ಮೂದುಲ್ ಫೈಝಿ ಓಲೆಮೊಂಡವು, ಈ ಹಿಂದೆ ಮಸೀದಿಯಲ್ಲಿ ಖತೀಬರಾಗಿ ಸೇವೆ ಸಲ್ಲಿಸಿದ್ದ ಉಮರ್ ಮುಸ್ಲಿಯಾರ್ ನಂಜೆ, ಉಮರ್ ಸಅದಿ ಬೈರಿಕಟ್ಟೆ, ಇಸ್ಮಾಯೀಲ್ ಅಹ್ಸನಿ ಸುಳ್ಯ, ಸ್ವಲಾಹುದ್ದೀನ್ ಸಖಾಫಿ ಮಾಡನ್ನೂರು, ಇಸ್ಮಾಯೀಲ್ ಅಶ್ರಫಿ ಎಣ್ಮೂರು, ಅಯ್ಯೂಬ್ ಇಂದಾದಿ, ಅಶ್ರಫ್ ಸಅದಿ ಬಿಳಿಯೂರು, ಶರೀಫ್ ಮಿಸ್ಬಾಹಿ ಕಾರ್ಕಾಳ, ಸ್ಥಳೀಯ ಸದರ್ ಮುಅಲ್ಲಿಂ ಅಬ್ದುಲ್ ಕರೀಂ ಬಾಹ್ಸನಿ, ಅಬೂಬಕರ್ ಮುಸ್ಲಿಯಾರ್, ಉಮರಾ ನೇತರರಾದ ಅಬ್ಬಾಸ್ ಹಾಜಿ ಮಣ್ಣಾಪು, ಯೂಸುಫ್ ಹಾಜಿ ಕೈಕಾರ, ಯೂಸುಫ್ ಗೌಸಿಯಾ, ಉಸ್ಮಾನ್ ಹಾಜಿ ಚೆನ್ನಾರ್, ಸಿದ್ದೀಕ್ ಹಾಜಿ ಕುಂಬ್ರ, ಶರೀಫ್ ಎಂಜಿನಿಯರ್, ಹಮೀದ್ ಎಂಜಿನಿಯರ್ ಮಾವಂಜಿ ಮೊದಲಾದವರು ಭಾಗವಹಿಸುವರು ಎಂದು ಜಮಾಅತ್ ಕಮಿಟಿ ಪ್ರಧಾನ ಕಾರ್ಯದರ್ಶಿ ಅಬ್ಬಾಸ್ ಹಾಜಿ ಅರಿಯಡ್ಕ ಹಾಗೂ ಉಪಾಧ್ಯಕ್ಷ ಎ.ಆರ್.ಇಬ್ರಾಹೀಂ ಅರಿಯಡ್ಕ ಪ್ರಕಟನೆಯಲ್ಲಿ ತಿಳಿಸಿದ್ದಾರೆ.