ಪತಿ, ಅತ್ತೆಯಿಂದ ಹಲ್ಲೆ: ಪತ್ನಿಯಿಂದ ದೂರು
ಉಡುಪಿ, ನ.10: ಬೇರೆ ಯುವತಿ ಜೊತೆ ಸಂಬಂಧ ಹೊಂದಿರುವ ಬಗ್ಗೆ ಪ್ರಶ್ನಿಸಿದ ಪತ್ನಿಗೆ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿರುವ ಬಗ್ಗೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೇಖಾ ಹಾಗೂ ನಾಗಾರ್ಜುನ ಪ್ರೀತಿಸಿ 2015ರ ಮೇ 14ರಂದು ಮದುವೆ ಯಾಗಿದ್ದು, 2018ರ ಅಕ್ಟೋಬರ್ ತಿಂಗಳ ನಂತರ ಇವರಿಬ್ಬರು ಸಾಲಿಗ್ರಾಮದ ರೆಸಿಡೆನ್ಸಿಯಲ್ಲಿ ವಾಸವಾಗಿದ್ದರು. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ನಾಗಾರ್ಜುನ, ಸೌಮ್ಯ ಎಂಬಾಕೆಯ ಜೊತೆ ಅನ್ಯೋನ್ಯವಾಗಿದ್ದ ಎನ್ನಲಾಗಿದೆ.
2020ರ ಅಕ್ಟೋಬರ್ ತಿಂಗಳಲ್ಲಿ ನಾಗಾರ್ಜುನ ಹಾಗೂ ಸೌಮ್ಯಳ ಸಂಬಂಧದ ಬಗ್ಗೆ ವಿಚಾರಿಸಿದಾಗ ನಾಗಾರ್ಜುನ ಮತ್ತು ಯಶೋಧಮ್ಮ ಸೇರಿಕೊಂಡು ರೇಖಾ ಅವರಿಗೆ ದೈಹಿಕ ಹಲ್ಲೆ ನಡೆಸಿ ಬೆದರಿಕೆ ಹಾಕಿರುವುದಾಗಿ ದೂರಲಾಗಿದೆ. ನ.4ರಂದು ಕ್ಲಿನಿಕ್ ಒಂದರಲ್ಲಿ ಒಟ್ಟಿಗೆ ಇದ್ದ ನಾಗಾರ್ಜುನ ಮತ್ತು ಸೌಮ್ಯ ಅವರಲ್ಲಿ ಮಾತನಾಡಲು ಹೋದ ರೇಖಾಳಿಗೆ ಅವರಿಬ್ಬರು ಹಲ್ಲೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
Next Story