ಬಂಟ್ವಾಳ ತಾಲೂಕು ‘ಆಲ್ ಇಂಡಿಯಾ ಮುಸ್ಲಿಂ ಡೆವಲಪ್ಮೆಂಟ್ ಫೋರಂ’ ರಚನೆ.
ಬಂಟ್ವಾಳ, ನ.16: ಆಲ್ ಇಂಡಿಯಾ ಮುಸ್ಲಿಂ ಡೆವಲಪ್ಮೆಂಟ್ ಫೋರಂ ಇದರ ಬಂಟ್ವಾಳ ತಾಲೂಕು ಸಮಿತಿಯ ರಚನೆಯು ಬಂಟ್ವಾಳ ತಾಲ್ಲೂಕು ಎನ್ಆರ್ಸಿ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ ಎಸ್. ಮುಹಮ್ಮದ್ ಶಾಫಿಯ ಅಧ್ಯಕ್ಷತೆಯಲ್ಲಿ ಜರುಗಿತು.
ರಾಜ್ಯ ಕಾರ್ಯಾಧ್ಯಕ್ಷ ಎಸ್. ಅಬೂಬಕ್ಕರ್ ಸಜೀಪ ಸಂಸ್ಥೆಯ ಧ್ಯೇಯೋದ್ದೇಶಗಳನ್ನು ವಿವರಿಸಿದರು. ರಾಜ್ಯ ಸಲಹಾ ಸಮಿತಿಯ ಪ್ರಧಾನ ಸಲಹೆಗಾರ ರಫೀಕ್ ಮಾಸ್ಟರ್ ದಿಕ್ಸೂಚಿ ಭಾಷಣಗೈದರು.
ವೇದಿಕೆಯಲ್ಲಿ ಜಿಲ್ಲಾಧ್ಯಕ್ಷ ಆಸೀಫ್ ಚೊಕ್ಕಬೆಟ್ಟು, ಬಂಟ್ವಾಳ ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ ಬೋಳಂತೂರು, ಯೂತ್ವಿಂಗ್ ಅಧ್ಯಕ್ಷ ಹಾಶೀರ್ ಪೇರಿಮಾರ್, ಕರಾವಳಿ ವಲಯದ ವೈದ್ಯಕೀಯ ಉಸ್ತುವಾರಿ ಸಿದ್ದೀಕ್ ಕೊಳಕೆ ಉಪಸ್ಥಿತರಿದ್ದರು.
ನೂತನ ಸಮಿತಿಯ ಅಧ್ಯಕ್ಷರಾಗಿ ಎಂಎಂ ಮುಹಮ್ಮದ್ (ಮೋನು) ನಂದಾವರ, ಉಪಾಧ್ಯಕ್ಷರಾಗಿ ಅಬ್ದುಲ್ ಸಲಾಂ, ಅಬೂಬಕ್ಕರ್ ಫರಂಗಿಪೇಟೆ, ಇಬ್ರಾಹಿಂ ಕೈಲಾರ್, ಪ್ರಧಾನ ಕಾರ್ಯದರ್ಶಿಯಾಗಿ ಮನ್ಸೂರ್ ಬಿಸಿ ರೋಡ್, ಕಾರ್ಯದರ್ಶಿಯಾಗಿ ಹಾರೂನ್ ರಶೀದ್ ಬಂಟ್ವಾಳ, ಖಜಾಂಚಿಯಾಗಿ ಅಲ್ತಾಫ್ ಮೇಲ್ಮನೆ ಫರಂಗಿಪೇಟೆ, ಸಂಘಟನಾ ಕಾರ್ಯದರ್ಶಿಯಾಗಿ ನವಾಝ್ ಬಡಕಬೈಲ್, ರಮ್ಲಾನ್ ಕಲಾಯಿ, ಬಂಟ್ವಾಳ ತಾಲೂಕು ಸಮಿತಿಯ ವೈದ್ಯಕೀಯ ಉಸ್ತುವಾರಿಯಾಗಿ ಇಶಾಕ್ ತುಂಬೆ, ಮುಖ್ತಾರ್ ಅಮ್ಮೆಮಾರ್, ಬಂಟ್ವಾಳ ತಾಲೂಕು ಘಟಕದ ಐಟಿ ಸೆಲ್ ಉಸ್ತುವಾರಿಯಾಗಿ ಇಶ್ರಾರ್ ಗೂಡಿನಬಳಿ, ಸವಾಝ್ ಬಂಟ್ವಾಳ ಅವರನ್ನು ಆಯ್ಕೆ ಮಾಡಲಾಯಿತು.