ಉಳಾಯಿಬೆಟ್ಟು: ಬ್ಲಡ್ ಹೆಲ್ಪ್ ಲೈನ್ ಹಾಗೂ ಯುಬಿಟಿ. ಹೆಲ್ಪ್ ಗೈಸ್ ಕಚೇರಿ ಉದ್ಘಾಟನೆ ಪ್ರಯುಕ್ತ ರಕ್ತದಾನ ಶಿಬಿರ
ಮಂಗಳೂರು, ನ.23: ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಹಾಗೂ ಯು.ಬಿ.ಟಿ. ಹೆಲ್ಪ್ ಗೈಸ್ ಉಳಾಯಿಬೆಟ್ಟು ಇದರ ನೂತನ ಕಚೇರಿ ಉದ್ಘಾಟನೆಯ ಪ್ರಯುಕ್ತ ಇಂಡಿಯನ್ ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್ ಮಂಗಳೂರು ಇದರ ಸಹಭಾಗಿತ್ವದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರವು ರವಿವಾರ ಉಳಾಯಿಬೆಟ್ಟು ಜಿ.ಕೆ.ಬಿ. ಕಾಂಪ್ಲೆಕ್ಸ್ ಸಭಾಂಗಣದಲ್ಲಿ ನಡೆಯಿತು.
ಸಾಲೆ ಜುಮಾ ಮಸೀದಿಯ ಅಧ್ಯಕ್ಷ ಇಸ್ಮಾಯೀಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಯು.ಬಿ.ಟಿ. ಹೆಲ್ಪ್ ಗೈಸ್ ಉಪಾಧ್ಯಕ್ಷ ಕಬೀರ್ ದಿಡ್ಡ್ ಉದ್ಘಾಟಿಸಿದರು.
ಶಿಬಿರದಲ್ಲಿ ಒಟ್ಟು 102 ಮಂದಿ ರಕ್ತದಾನ ಮಾಡಿದರು. ದಾನಿಗಳಿಂದ ರಕ್ತ ಸಂಗ್ರಹಿಸುವಲ್ಲಿ ಇಂಡಿಯನ್ ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್ ಮಂಗಳೂರು ಇದರ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಸಹಕರಿಸಿದರು.
ಮುಖ್ಯ ಅತಿಥಿಗಳಾಗಿ ಚೇತನ್ ಕೊಪ್ಪ, ಆರಿಫ್ ಬಾಖವಿ, ಅಯ್ಯೂಬ್ ಕನಿಬೆಟ್ಟು, ಮುಸ್ತಫ ಉಳಾಯಿಬೆಟ್ಟು, ಎಸ್.ಎಂ.ಎ.ಇಕ್ಬಾಲ್, ಜಿ.ಕೆ.ಬಿ.ಅಬ್ದುಲ್ ರಹಿಮಾನ್, ಶರೀಫ್ ಕನಿಬೆಟ್ಟು ಮೊದಲಾದವರು ಭಾಗವಹಿಸಿದ್ದರು.
Next Story