ಹಳೆ ವೈಷಮ್ಯ : ವ್ಯಕ್ತಿಯ ಮೇಲೆ ಚೂರಿಯಿಂದ ಹಲ್ಲೆ
ಪಡುಬಿದ್ರಿ : ಹಳೆ ದ್ವೇಷದಿಂದ ವ್ಯಕ್ತಿಯೊರ್ವನ ಮೇಲೆ ಬೈಕ್ನಲ್ಲಿ ಬಂದ ತಂಡವೊಂದು ಕೊಲೆಯತ್ನ ನಡೆಸಿದ ಘಟನೆ ಇಲ್ಲಿನ ಪಾದೆಬೆಟ್ಟುವಿನಲ್ಲಿ ರವಿವಾರ ರಾತ್ರಿ ನಡೆದಿದೆ.
ಕೃಷ್ಣಾಪುರ ನಿವಾಸಿ ಫಾರೂಕ್ ಎಂಬವರು ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಪಾದೆಬೆಟ್ಟು ಗ್ರಾಮದ ವಿಷ್ಣುಮೂರ್ತಿ ದೇವಸ್ಥಾನದ ದ್ವಾರದ ಬಳಿ ಟೈಲರಿಂಗ್ ಅಂಗಡಿಯ ಬಳಿ ನಿನ್ನೆ ರಾತ್ರಿ ಈ ಘಟನೆ ನಡೆದಿದೆ. ಫಾರೂಕ್ ಅಂಗಡಿಯ ಬಳಿ ನಿಂತಿದ್ದ ವೇಳೆ ಆರೋಪಿಗಳಾದ ಅಶ್ಫಾನ್, ಆರೀಫ್, ಹಾಗೂ ರಿಯಾಝ್ ಎಂಬವರು ಬೈಕ್ ನಲ್ಲಿ ಬಂದು ಚೂರಿ ಹಾಗೂ ಕಬ್ಬಿಣದ ಸರಳಿನಿಂದ ಹಲ್ಲೆ ನಡೆಸಿದ್ದು, ತಡೆಯಲು ಪ್ರಯತ್ನಿಸಿದ ಟೈಲರ್ ಅಂಗಡಿಯವರ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಪಡುಬಿದ್ರೆ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
Next Story