ಉಡುಪಿ ರಥಬೀದಿ ಗೆಳೆಯರು ಅಧ್ಯಕ್ಷರಾಗಿ ಪ್ರೊ.ಎಚ್.ಮುರಳೀಧರ ಉಪಾಧ್ಯ ಪುನರಾಯ್ಕೆ
ಉಡುಪಿ, ಡಿ.1: ಉಡುಪಿಯ ಪ್ರತಿಷ್ಠಿತ ಸಾಂಸ್ಕೃತಿಕ ವೇದಿಕೆಯಾದ ರಥಬೀದಿ ಗೆಳೆಯರ ವಾರ್ಷಿಕ ಮಹಾಸಭೆಯಲ್ಲಿ ಪ್ರೊ. ಹಿರಿಯಡಕ ಮುರಳೀಧರ ಉಪಾಧ್ಯ ಅಧ್ಯಕ್ಷರಾಗಿ, ಪ್ರೊ. ಸುಬ್ರಹ್ಮಣ್ಯ ಜೋಶಿ ಕಾರ್ಯದರ್ಶಿಯಾಗಿ ಪುನರಾಯ್ಕೆಯಾಗಿದ್ದಾರೆ.
ಎನ್.ಸಂತೋಷ್ ಬಲ್ಲಾಳ್, ಉದ್ಯಾವರ ನಾಗೇಶ್ ಕುಮಾರ್ ಉಪಾಧ್ಯಕ್ಷ ರಾಗಿ, ವೇದವ್ಯಾಸ ಭಟ್ ಖಜಾಂಚಿಯಾಗಿ, ಜಿ.ಪಿ. ಪ್ರಭಾಕರ, ಎನ್. ಭಾಸ್ಕರ ಸುವರ್ಣ ಜೊತೆ ಕಾರ್ಯದರ್ಶಿಯಾಗಿ, ಸಂತೋಷ್ ಶೆಟ್ಟಿ ಹಿರಿಯಡ್ಕ, ಸಂತೋಷ್ ನಾಯಕ್ ಪಟ್ಲ ನಾಟಕ ತಂಡದ ಸಂಚಾಲಕರಾಗಿ, ಡಾ. ಯು.ಸಿ. ನಿರಂಜನ್, ಡಾ. ರಾಘವೇಂದ್ರ ರಾವ್, ಮೇಟಿ ಮುದಿಯಪ್ಪ, ಉಮೇಶ್ ಶೆಟ್ಟಿ ಹೇರೂರು, ದೀಪಕ್ ಜೈನ್, ಬಾಲಗಂಗಾಧರ ರಾವ್ ಆಡಳಿತ ಮಂಡಳಿಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
Next Story