ಚೂರಿ ಇರಿತ ಪ್ರಕರಣ: ಮೂವರ ಬಂಧನ
ಪಡುಬಿದ್ರಿ : ಹಳೆ ದ್ವೇಷದಿಂದ ವ್ಯಕ್ತಿಯೊರ್ವನ ಮೇಲೆ ಬೈಕ್ನಲ್ಲಿ ಬಂದ ತಂಡವೊಂದು ಚೂರಿ ಇರಿದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕೃಷ್ಣಾಪುರ ಫಾರೂಕ್ಗೆ ಹಲ್ಲೆ ನಡೆಸಿದ ಆರೋಪಿಗಳಾದ ಮೂಡು ಪಲಿಮಾರಿನ ಅಶಾನ್, ಮುದರಂಗಡಿಯ ಆರೀಫ್, ಕಂಚಿನಡ್ಕದ ರಿಯಾಝ್ ಬಂಧಿತರು. ಆರೋಪಿಗಳನ್ನು ಉಡುಪಿಯ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story