ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿಗೆ ಆಯ್ಕೆ
ಮಂಗಳೂರು, ಡಿ.3: ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ 2020-21ನೆ ಸಾಲಿನ ಅಧ್ಯಕ್ಷರಾಗಿ ಕವಿ ಕಾ.ವೀ.ಕೃಷ್ಣದಾಸ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಪರಿಷತ್ತಿನ ಮಾಜಿ ಅಧ್ಯಕ್ಷ ಪ್ರೊ.ಕೃಷ್ಣಮೂರ್ತಿಯ ಮುಂದಾಳುತ್ವದಲ್ಲಿ ಇತ್ತೀಚೆಗೆ ನಡೆದ ಪರಿಷತ್ತಿನ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅರುಣಾ ನಾಗರಾಜ್ (ಉಪಾಧ್ಯಕ್ಷೆ), ವಿಜಯಲಕ್ಷ್ಮಿಕಟೀಲು (ಕಾರ್ಯದರ್ಶಿ),ವೆಂಕಟೇಶ ಗಟ್ಟಿ (ಜೊತೆ ಕಾರ್ಯದರ್ಶಿ), ಲತೀಶ್ ಸಂಕೊಳಿಗೆ (ಕೋಶಾಧಿಕಾರಿ) ಅವರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಯಿತು.
ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ರೇಮಂಡ್ ಡಿಕುನ್ಹ ತಾಕೊಡೆ, ವಿಘ್ನೇಶ್ ಭಿಡೆ, ಡಾ. ಸುರೇಶ ನೆಗಳಗುಳಿ ಉಪಸ್ಥಿತರಿದ್ದರು.
Next Story