ಚುನಾವಣಾ ಅಭ್ಯರ್ಥಿಗೆ ಹಲ್ಲೆ: ದೂರು
ಹಿರಿಯಡ್ಕ, ಡಿ.26: ಬೊಮ್ಮರಬೆಟ್ಟು ಗ್ರಾಮದ 2ನೆ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿ ರುವ ಅಭ್ಯರ್ಥಿಗೆ ವ್ಯಕ್ತಿಯೊಬ್ಬ ಹೊಡೆದು ದೂಡಿ ಹಾಕಿರುವ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೊಮ್ಮರಬೆಟ್ಟು ಗ್ರಾಮದ ಶಿಲ್ಪಾಶ್ರೀ (28) ಎಂಬವರು ಮನೆಯಲ್ಲಿರುವ ಡಿ.23ರಂದು ಬೆಳಗ್ಗೆ ಪ್ರವೀಣ್ ನಾಯ್ಕ್ ಎಂಬಾತ ಬಂದು ಶಿಲ್ಪಾಶ್ರೀ ಗಂಡ ಪ್ರಸಾದ್ ಭಂಡಾರಿಗೆ ಅವ್ಯಾಚ ಶಬ್ದಗಳಿಂದ ಬೈದು ಬೆದರಿಸಿದರು. ಈ ವೇಳೆ ಶಿಲ್ಪಾಶ್ರೀ ಅಡ್ಡ ನಿಂತಾಗ ಪ್ರಸಾದ್, ಶಿಲ್ಪಾಶ್ರೀಗೆ ಹೊಡೆದು ದೂಡಿ ಹೋಗಿ ರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
Next Story