ವಿ.ಕೆ. ಉತ್ಸವ್ ಶಾಪ್ ಆ್ಯಂಡ್ ವಿನ್ ವಿಶೇಷ ಡ್ರಾ
ತೊಕ್ಕೊಟ್ಟು, ಜ.5: ರಾಷ್ಟ್ರೀಯ ಹೆದ್ದಾರಿ 66ರ ತೊಕ್ಕೊಟ್ಟು ಸಮೀಪದ ಕಲ್ಲಾಪು ವಿ.ಕೆ.ಉತ್ಸವ್ ಫರ್ನೀಚರ್ ಮತ್ತು ಒಲೆಕ್ಟ್ರಾನಿಕ್ಸ್ನಲ್ಲಿ ಮಂಗಳವಾರ ನಡೆದ ವಿ.ಕೆ. ಉತ್ಸವ್ ಶಾಪ್ ಆಂಡ್ ವಿನ್-2020 ವಿಶೇಷ ಡ್ರಾ ಸಮಾರಂಭ ನೆರವೇರಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಉಳ್ಳಾಲದ ಮದನಿ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್, ವ್ಯಾಪಾರ-ವಹಿವಾಟನ್ನು ಕಠಿಣ ಪರಿಶ್ರಮದೊಂದಿಗೆ ಲಾಭಕ್ಕೆ ಮಾತ್ರವಲ್ಲದೆ ಉತ್ತಮ ಉದ್ದೇಶದಿಂದ ನಡೆಸಿದರೆ ಯಶಸ್ಸು ನಿಶ್ಚಿತ ಎಂದು ತಿಳಿಸಿದ್ದಾರೆ.
ಎಲ್ಲ ವರ್ಗಗಳಿಗೂ ಸಲ್ಲುವ ಪೀಠೋಪಕರಣಗಳು ವಿ.ಕೆ. ಫರ್ನೀಚರ್ ಮತ್ತು ಇಲೆಕ್ಟ್ರಾನಿಕ್ಸ್ ಮಳಿಗೆಯಲ್ಲಿ ಲಭ್ಯವಿದೆ. ನಗುಮುಖದ ಸೇವೆ, ಹಣಕಾಸಿನ ಸೌಲಭ್ಯದಿಂದಾಗಿ ಕೊರೋನ ಕಾಲದಲ್ಲೂ ಸಂಸ್ಥೆಗೆ ಯಾವುದೇ ತೊಂದರೆಯಾಗಿಲ್ಲ. ಮುಂದಿನ ವರ್ಷ ಇನ್ನೊಂದು ಮಳಿಗೆ ಆರಂಭವಾಗಲಿ ಎಂದು ಶುಭ ಹಾರೈಸಿದರು.
ಕೆನರಾ ಬ್ಯಾಂಕ್ ನಿವೃತ್ತ ಅಧಿಕಾರಿ ಎ.ಎಸ್.ಭಟ್ ಮಾತನಾಡಿ, ಸೇವಾ ಮನೋಭಾವ, ಆಕರ್ಷಕ ಬೆಲೆ, ನಿರಂತರ ಪರಿಶ್ರಮದ ಮೂಲಕ ಗ್ರಾಹಕರ ಮನಸ್ಸನ್ನು ತಲುಪಿದ್ದರಿಂದ ಸಂಸ್ಥೆ ಯಶಸ್ಸು ಕಾಣಲು ಕಾರಣ ಎಂದು ತಿಳಿಸಿದರು.
ಸಂಸ್ಥೆಯ ಆಡಳಿತ ನಿರ್ದೇಶಕ ವಿಠಲ್ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು. ನಗರಸಭೆಯ ಮಾಜಿ ಉಪಾಧ್ಯಕ್ಷ ದಿನೇಶ್ ರೈ ಉಳ್ಳಾಲಗುತ್ತು, ಉಳ್ಳಾಲ ನಗರಸಭೆಯ ಅಧ್ಯಕ್ಷೆ ಚಿತ್ರಕಲಾ ಚಂದ್ರಕಾಂತ್, ಬಿಜೆಪಿ ಜಿಲ್ಲಾ ಕಾರ್ಯಕಾರಿ ಸದಸ್ಯ ಚಂದ್ರಹಾಸ್ ಅಡ್ಯಂತಾಯ, ಅಲೆಕ್ಸ್ ಕ್ಯಾಸ್ತಲಿನೋ, ಸಂದೇಶ್ ಶೆಟ್ಟಿ, ಸಂಸ್ಥೆಯ ಪಾಲುದಾರೆ ವಿನುತಾ ಕುಲಾಲ್ ಮುಖ್ಯ ಅತಿಥಿಗಳಾಗಿದ್ದರು.
ಕಾರ್ಯಕ್ರಮದಲ್ಲಿ ಟೈಟಸ್ ನೊರೊನ್ಹಾ ಸ್ವಾಗತಿಸಿದರು.