ವಿದ್ಯಾಪೋಷಕ ವಿದ್ಯಾರ್ಥಿನಿ ಮನೆಗೆ ವಿದ್ಯುತ್ ಸಂಪರ್ಕ
ಉಡುಪಿ, ಜ.17: ವಿದ್ಯಾಪೋಷಕ ವಿದ್ಯಾರ್ಥಿನಿ ಕಾರ್ಕಳದ ಹಿರ್ಗಾನದ ದೀಕ್ಷಾ ಎಂಬವರ ಮನೆಗೆ ಕಲ್ಪಿಸಲಾದ ವಿದ್ಯುತ್ ಸಂಪರ್ಕವನ್ನು ಉಡುಪಿ ಮೆಸ್ಕಾಂ ಅಧಿಕಾರಿ ಎಸ್. ಣರಾಜ ಭಟ್ ರವಿವಾರ ಉದ್ಘಾಟಿಸಿದರು.
ಪ್ರಥಮ ಪಿಯುಸಿ ವಿದ್ಯಾರ್ಜನೆಗೈಯುತ್ತಿರುವ ಪ್ರತಿಭಾನ್ವಿತ ವಿದ್ಯಾರ್ಥಿನಿ ದೀಕ್ಷಾ(ಎಸೆಸೆಲ್ಸಿಯಲ್ಲಿ ಶೇ.94 ಅಂಕ) ಮನೆಗೆ ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ ರಾವ್ ಹಾಗೂ ಪದಾಧಿಕಾರಿಗಳಾದ ಮುರಲಿ ಕಡೆಕಾರ್, ನಾರಾಯಣ ಎಂ. ಹೆಗಡೆ, ಪಿ.ದಿನೇಶ್ ಪೂಜಾರಿ, ಅಶೋಕ್ ಎಂ. ತೆರಳಿ ಪರಿಶೀಲಿಸಿದರು.
ಅತಿ ಶೀಘ್ರದಲ್ಲಿ ಮನೆಗೆ ಶೌಚಾಲಯವನ್ನು ನಿರ್ಮಿಸಿಕೊಡುವ ಭರವಸೆ ಯನ್ನು ಸಂಸ್ಥೆಯ ಅಧ್ಯಕ್ಷರು ಈ ಸಂದರ್ಭದಲ್ಲಿ ನೀಡಿ ದರು. ವಿದ್ಯುತ್ ಸಂಪರ್ಕಕ್ಕೆ ನೆರವು ನೀಡಿದ ಶ್ರೀನಿವಾಸ ಹೆಬ್ಬಾರರಿಗೆ ಕೃತಜ್ಞತೆ ಸಲ್ಲಿಸಲಾಯಿತು. ಈಗಾ ಗಲೇ ಪ್ರಥಮ ಪಿ.ಯು.ಸಿ.ಯ ಇಬ್ಬರು ವಿದ್ಯಾರ್ಥಿನಿಯರಿಗೆ ಸೆಲ್ಕೋ ಸಂಸ್ಥೆ ಸೋಲಾರ್ ದೀಪಗಳನ್ನು ಅಳವಡಿಸಲಾಗಿದೆ.
Next Story