ದಲಿತ ಮುಖಂಡ ಭಾಸ್ಕರ್ ಪ್ರಸಾದ್ ಕೊಲೆ ಯತ್ನ: ಎಸ್ಡಿಪಿಐ ಖಂಡನೆ
ಬೆಂಗಳೂರು, ಜ.17: ದಲಿತ ಮುಖಂಡ, ನ್ಯೂಸ್-14 ಚಾನೆಲ್ ಸಂಪಾದಕ ಭಾಸ್ಕರ್ ಪ್ರಸಾದ್ ಕೊಲೆಯತ್ನ ಘಟನೆ ಖಂಡನೀಯ ಎಂದು ಎಸ್ಡಿಪಿಐ ರಾಜ್ಯ ಕಾರ್ಯದರ್ಶಿ ಅಬ್ರಾರ್ ಅಹ್ಮದ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬಿಜೆಪಿ ಮತ್ತು ಮನುವಾದಿ ಸಿದ್ಧಾಂತಗಳ ವಿರುದ್ಧ ನಿರಂತರ ಹೋರಾಟ ಮಾಡುತ್ತಿರುವ ಮತ್ತು ಸಾಮಾಜಿಕ ಮಾಧ್ಯಮದ ಮೂಲಕ ದಲಿತ-ಮುಸ್ಲಿಂ ಮತ್ತು ಅವಕಾಶ ವಂಚಿತ ಜನ ಸಮುದಾಯಗಳಿಗೆ ಜಾಗೃತಿ ಮೂಡಿಸುತ್ತಿರುವ ಭಾಸ್ಕರ್ ಪ್ರಸಾದ್ರ ಶ್ರಮವನ್ನು ಸಹಿಸದ ಸಮಾಜ ದ್ರೋಹಿಗಳು ಮತ್ತು ಸಂಘಪರಿವಾರದವರು ನಿರಂತರ ಬೆದರಿಕೆ ನೀಡಿರುವುದಲ್ಲದೆ, ಮಾನಸಿಕ ಹಿಂಸೆ ಮತ್ತು ಮಾನಹಾನಿಗೆ ಪ್ರಯತ್ನಿಸಿದ್ದಾರೆ. ಅದರ ಮುಂದುವರಿದ ಭಾಗವಾಗಿ ಇತ್ತೀಚೆಗೆ ಕೊಲೆಯತ್ನ ಘಟನೆ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಸಲ್ಲಿಸಿರುವ ದೂರನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ, ಕೊಲೆಯತ್ನ ಮಾಡಿರುವ ಕಿಡಿಗೇಡಿಗಳನ್ನು ಬಂಧಿಸಬೇಕು ಎಂದು ಅಬ್ರಾರ್ ಆಗ್ರಹಿಸಿದ್ದಾರೆ.
Next Story