ಬೆಂಗ್ರೆ: ಜ.19ರಂದು ಯುನಿವೆಫ಼್ ಕರ್ನಾಟಕದಿಂದ ಸೀರತ್ ಸಮಾವೇಶ
ಮಂಗಳೂರು, ಜ.18: ಯುನಿವೆಫ಼್ ಕರ್ನಾಟಕ ‘ಸಾಮಾಜಿಕ ತಾರತಮ್ಯ ಮತ್ತು ಪ್ರವಾದಿ ಮುಹಮ್ಮದ್ (ಸ)." ಎಂಬ ಕೇಂದ್ರೀಯ ವಿಷಯದಲ್ಲಿ ಹಮ್ಮಿಕೊಂಡಿರುವ ‘ಅರಿಯಿರಿ ಮನುಕುಲದ ಪ್ರವಾದಿಯನ್ನು’ ಅಭಿಯಾನದ ಪ್ರಯುಕ್ತ ಬೆಂಗ್ರೆ ಶಾಖೆಯ ವತಿಯಿಂದ ಜ.19ರಂದು ರಾತ್ರಿ 8 ಗಂಟೆಗೆ ಬೆಂಗ್ರೆ ಮುಖ್ಯ ರಸ್ತೆಯ ಎಸ್ಸೆಸ್ಸೆಫ್ ಕಚೇರಿಯ ಬಳಿ ಸೀರತ್ ಸಮಾವೇಶ ಜರುಗಲಿದೆ.
‘ಭಾರತದಲ್ಲಿ ಇಸ್ಲಾಮ್ ಮತ್ತು ಪ್ರವಾದಿ’ ಎಂಬ ವಿಷಯದಲ್ಲಿ ಯುನಿವೆಫ಼್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಉಪನ್ಯಾಸ ನೀಡಲಿದ್ದಾರೆ ಎಂದು ಬೆಂಗ್ರೆ ಶಾಖೆಯ ಸಂಚಾಲಕ ಇಫ್ರಾಝ್ ಅಹ್ಮದ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story