ಡಿಕೆಎಸ್ಸಿ ಡೆವಲಪ್ಮೆಂಟ್ ಕಮಿಟಿ ಬೆಳಪು ಶಾಖೆ ಉದ್ಘಾಟನೆ
ಕಾಪು, ಜ.20: ಮಂಗಳೂರಿನ ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್(ಡಿಕೆಎಸ್ಸಿ) ಡೆವಲಪ್ಮೆಂಟ್ ಕಮಿಟಿಯ ಬೆಳಪು ಶಾಖೆಯ ಉದ್ಘಾಟನೆ ಕಾರ್ಯಕ್ರಮ ಮಂಗಳವಾರ ನಡೆಯಿತು.
ನೂತನ ಶಾಖೆಯನ್ನು ಡಿಕೆಎಸ್ಸಿ ಕೇಂದ್ರ ಸಮಿತಿ ಮತ್ತು ಮೂಳೂರಿನ ಮರ್ಕಝ್ ತಅಲೀಮಿಲ್ ಇಹ್ಸಾನ್ ಇದರ ಅಧ್ಯಕ್ಷ ಅಸ್ಸೈಯದ್ ಆಟಕೋಯ ತಂಙಳ್ ಕುಂಬೋಳ್ ದುಆಗೈದರು. ಬೆಳಪು ಬದ್ರಿಯಾ ಜುಮಾ ಮಸೀದಿಯ ಖತೀಬ್ ಅಬ್ದುರ್ರಶೀದ್ ಸಖಾಫಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮರ್ಕಝ್ ತಅಲೀಮಿಲ್ ಇಹ್ಸಾನ್ ಕಾರ್ಯಾಧ್ಯಕ್ಷ ಅಸ್ಸೈಯದ್ ಮುಖ್ತಾರ್ ತಂಙಳ್ ಕುಂಬೋಳ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಮೂಳೂರು ಅಲ್ ಇಹ್ಸಾನ್ ಎಜು ಪ್ಲಾನೆಟ್ ದಅವಾ ವಿದ್ಯಾರ್ಥಿ ಹಾಫಿಳ್ ಮುಹಮ್ಮದ್ ಅಜ್ಮಲ್ ಗೇರುಕಟ್ಟೆ ಕಿರಾಅತ್ ಪಠಿಸಿದರು. ಮರ್ಕಝ್ ತಅ್ಲೀಮಿಲ್ ಇಹ್ಸಾನ್ ವ್ಯವಸ್ಥಾಪಕ ಮುಸ್ತಫಾ ಸಅದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹುಸೈನ್ ಹಾಜಿ ಕಿನ್ಯಾ ನೂತನ ಸಮಿತಿ ರಚನೆಯ ಜವಾಬ್ದಾರಿ ನಿರ್ವಹಿಸಿದರು.
ಗೌರವಾಧ್ಯಕ್ಷರಾಗಿ ಅಬ್ದುರ್ರಝಾಕ್ ಹಾಜಿ ಮಲಂಗೋಳಿ, ಅಧ್ಯಕ್ಷರಾಗಿ ಕರೀಂ ಹಾಜಿ ಕಳತ್ತೂರ್, ಪ್ರಧಾನ ಕಾರ್ಯದರ್ಶಿಯಾಗಿ ಅಶ್ರಫ್ ಹುಸೈನ್ ಕೊಲ್ನಾಡ್, ಕೋಶಾಧಿಕಾರಿಯಾಗಿ ಹಾಜಬ್ಬ ಪಯ್ಯಾರ್ ಅವಿರೋಧವಾಗಿ ಆಯ್ಕೆಯಾದರು.
ಮುಖ್ಯ ಅತಿಥಿಗಳಾಗಿ ಅಬ್ದುಲ್ ರಹಿಮಾನ್ ಮಣಿಪಾಲ, ಇಸ್ಮಾಯಿಲ್ ಹಾಜಿ ಕಿನ್ಯಾ, ಹಸನ್ ಸಖಾಫಿ ಬೆಳಪು ಮಾತನಾಡಿ ಶುಭ ಹಾರೈಸಿದರು. ಡಿಕೆಎಸ್ಸಿ ಡೆವಲಪ್ ಮೆಂಟ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಶಂಸುದ್ದೀನ್ ಬಳ್ಕುಂಜೆ ಸ್ವಾಗತಿಸಿದರು. ಶಂಸುದ್ದೀನ್ ಬಳ್ಕುಂಜೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.