ಚಕ್ ಅಮಾನ್ಯ: ಆರೋಪಿಗೆ ಸಜೆ
ಪುತ್ತೂರು: ಚೆಕ್ ಅಮಾನ್ಯ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯಾಗಿದ್ದ, ಪುತ್ತೂರು ನಗರದ ಸಾಮೆತ್ತಡ್ಕ ನಿವಾಸಿ ವಲೇರಿಯನ್ ಡಿಸೋಜ ಎಂಬವರ ಪುತ್ರ ಮೆಕ್ಸಿಮ್ ವಿಲ್ಫೆಡ್ ಡಿಸೋಜ(೪೫) ಎಂಬಾತನಿಗೆ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ.
ವಿಲ್ಫೆಡ್ ಡಿಸೊಜ ಅವರು ವಿಟ್ಲ ಮುಡ್ನೂರು ನಿವಾಸಿ ಶಶಿ ಭಟ್ ಎಂಬವರಿಗೆ ನೀಡಬೇಕಾಗಿದ್ದ ರೂ. 80ಸಾವಿರ ಹಣವನ್ನು ಹಿಂದಿರುಗಿಸದೆ ಚೆಕ್ ನೀಡಿ ಕಳೆದ ೬ವರ್ಷಗಳಿಂದ ಸತಾಯಿಸುತ್ತಿದ್ದರು ಎಂದು ಆರೋಪಿಸಲಾಗಿತ್ತು. ಈ ಚೆಕ್ ಅಮಾನ್ಯಗೊಂಡಿರುವ ಹಿನ್ನಲೆಯಲ್ಲಿ ಶಶಿ ಭಟ್ ಅವರು ಆರೋಪಿಯ ವಿರುದ್ದ ನ್ಯಾಯಾಲಯದಲ್ಲಿ ಖಾಸಗಿ ದೂರು ನೀಡಿದ್ದರು. ಆದರೆ ವಿಲ್ಫೆಡ್ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರಿಸಿಕೊಂಡಿದ್ದರು ಎನ್ನಲಾಗಿದ್ದು, ವಾರದ ಹಿಂದೆ ಆರೋಪಿಯು ಸಾಮೆತಡ್ಕದಲ್ಲಿರುವ ತನ್ನ ಮನೆಗೆ ಬಂದಿರುವ ಮಾಹಿತಿ ಅರಿತ ಪುತ್ತೂರು ನಗರ ಪೊಲೀಸರು ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ವಿಚಾರಣೆ ನಡೆಸಿ ನ್ಯಾಯಾಲಯ ಆರೋಪಿಗೆ ರೂ. ೮೦ ಸಾವಿರ ದಂಡ ವಿಧಿಸಿದ್ದು, ತಪ್ಪಿದಲ್ಲಿ 3 ತಿಂಗಳ ಜೈಲು ಶಿಕ್ಷೆ ಅನುಭವಿಸುವಂತೆ ಆದೇಶಿಸಿದೆ.