ಕಾರ್ಕಳ: ಜ.24ರಂದು ಆದಿಗ್ರಾಮೋತ್ಸವ ಸಾಹಿತ್ಯ ಸಮ್ಮೇಳನ
ಕಾರ್ಕಳ, ಜ.23: ಆದಿಗ್ರಾಮೋತ್ಸವ ಸಮಿತಿ, ಅಖಿಲ ಕರ್ನಾಟಕ ಬೆಳ ದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ, ಲಯನ್ಸ್ ಕ್ಲಬ್ ಮುನಿಯಾಲು, ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂಡಳಿಗಳ ಸಹಯೋಗದಲ್ಲಿ ಮೂರನೆ ಆದಿಗ್ರಾಮೋತ್ಸವ ಸಾಹಿತ್ಯ ಸಮ್ಮೇಳನ ಕಡ್ತಲ-ಸಿರಿಬೈಲಿನ ಶ್ರೀಬರ್ಭರೇಶ್ವರ ದುರ್ಗಾಪರ ಮೇಶ್ವರೀ ದೇವ ಸ್ಥಾನದ ವಠಾರದಲ್ಲಿ ಜ.24ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆವರೆಗೆ ಜರಗಲಿದೆ.
ತ್ರಿಭಾಷಾ ಸಾಹಿತಿ ಮೌರಿಸ್ ತಾವ್ರೋ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯ ಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಅವರು ಉದ್ಘಾಟಿಸಲಿರುವರು. ಆರಾಧನಾ ಕೇಂದ್ರಗಳ ಶಿಲ್ಪಿ ಮಹಮ್ಮದ್ ಗೌಸ್ಗೆ ಆದಿಗ್ರಾಮೋತ್ಸವ ಗೌರವ ಮತ್ತು ಡಾ.ಸುಧೀರ್ ಹೆಗ್ಡೆಗೆ ಗ್ರಾಮ ಗೌರವ ನೀಡಲಾಗುವುದು ಎಂದು ಸಂಘಟಕ ಡಾ.ಶೇಖರ ಅಜೆಕಾರು ತಿಳಿಸಿದ್ದಾರೆ.
ಸಮಾರೋಪ ಆಶಯ ಭಾಷಣವನ್ನು ವಾಗ್ಮಿ ಮುನಿರಾಜ ರೆಂಜಾಳ ನೆರವೇರಿಸಲಿರುವರು. ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ಬಿ.ಸದಾಶಿವ ಪ್ರಭು ಎಳ್ಳಾರೆ ಮತ್ತು ಕ್ಯಾಪ್ಟನ್ ಗಣೇಶ ಕಾರ್ಣಿಕ್ ಪ್ರಶಸ್ತಿ ಪ್ರದಾನ ಮಾಡಲಿರುವರು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.