ನಿಟ್ಟೂರು ಬಾಲನ್ಯಾಯ ಮಂಡಳಿಯಲ್ಲಿ ಗಣರಾಜ್ಯೋತ್ಸವ
ಉಡುಪಿ, ಜ.26: ನಿಟ್ಟೂರು ಬಾಲನ್ಯಾಯ ಮಂಡಳಿಯಲ್ಲಿ ಇಂದು ನಡೆದ 72ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಉಡುಪಿ ಜೆಎಂಎಫ್ಸಿ ಪ್ರಧಾನ ಸಿವಿಲ್ ನ್ಯಾಯಾಧೀಶ ಮತ್ತು ಬಾಲ ನ್ಯಾಯ ಮಂಡಳಿ ಅಧ್ಯಕ್ಷ ಇರ್ಫಾನ್ ಧ್ವಜಾರೋಹಣ ನೆರವೇರಿಸಿ ಶುಭ ಹಾರೈಸಿದರು.
ಬಾಲ ನ್ಯಾಯ ಮಂಡಳಿಯ ಸದಸ್ಯರಾದ ರಾಜೇಶ್, ಅಮೃತಕಲಾ, ಭದ್ರಿನಾಥ ನಾಯಿರಿ, ಹಿರಿಯ ಸಹಾಯಕ ಸರಕಾರಿ ಅಭಿಯೋಜಕಿ ಜಯಂತಿ, ವೀಕ್ಷಣಾಲಯದ ಪರಿವೀಕ್ಷಣಾಧಿಕಾರಿ ಗಣೇಶ್ ಮರಾಠೆ, ಉಡುಪಿ ಎಸ್ಪಿ ಕಚೇರಿಯ ಕಿರಿಯ ಕಾನೂನು ಅಧಿಕಾರಿ ಮುಮ್ತಾಝ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್ ಉಪಸ್ಥಿತರಿದ್ದರು.
Next Story