ಕರುವೇಲು ಮಸೀದಿ ಯಲ್ಲಿ ಗಣರಾಜ್ಯೋತ್ಸವ
ಪುತ್ತೂರು : 72 ನೇ ಗಣರಾಜ್ಯೋತ್ಸವ ಕರುವೇಲು ಕುವ್ವತುಲ್ ಇಸ್ಲಾಂ ಮದ್ರಸ ದಲ್ಲಿ ಮಂಗಳವಾರ ನಡೆಯಿತು.
ಕರುವೇಲು ಜಮಾಅತ್ ಅಧ್ಯಕ್ಷ ಉಮರಬ್ಬ ಅವರು ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಧ್ವಜಾರೋಹಣ ನೆರವೇರಿಸಿದರು.
ಜಮಾಅತ್ ಖತೀಬ್ ಸೈಯದ್ ಅನಸ್ ಹಾದೀ ತಂಙಳ್ ಅಲ್ ಅಝ್ಹರಿ ಗಣರಾಜ್ಯೋತ್ಸವ ಸಂದೇಶ ನೀಡಿದರು. ಮದ್ರಸ ವಿದ್ಯಾರ್ಥಿಗಳು ದೇಶಭಕ್ತಿ ಗೀತೆ ಹಾಡಿದರು. ಕಾರ್ಯಕ್ರಮದಲ್ಲಿ ಝಿಕ್ರ್ ಕಮೀಟಿ ಅಧ್ಯಕ್ಷ ಶರೀಫ್ ನಿರ್ಮಾ, ಎಸ್ಕೆಎಸ್ಸೆಸ್ಸೆಫ್ ಅಧ್ಯಕ್ಷ ಅಬ್ದುಲ್ ಲತೀಫ್, ವರ್ಕಿಂಗ್ ಕಾರ್ಯದರ್ಶಿ ಎ.ಕೆ.ಯಸ್. ಹಾರಿಸ್, ಹಾರಿಸ್ ಕೀಲಂಗಡಿ ಮುಂತಾದವರು ಉಪಸ್ಥಿತರಿದ್ದರು. ಮದ್ರಸ ಅಧ್ಯಾಪಕರಾದ ಅನ್ಸಾರ್ ಮುಸ್ಲಿಯಾರ್ ಸ್ವಾಗತಿಸಿ, ವಂದಿಸಿದರು.
Next Story