‘ಸಂವಿಧಾನ ಅರಿವು ಮತ್ತು ಜಾಗೃತಿ’ ಕಾರ್ಯಕ್ರಮ
ಅಡ್ಡೂರು, ಜ.27: ಗಣರಾಜ್ಯೋತ್ಸವದ ಪ್ರಯುಕ್ತ ಫ್ರೆಂಡ್ಸ್ ಸರ್ಕಲ್ ಕೆಳಗಿನಕೆರೆ ಹಾಗೂ ಎಸ್ಡಿಎಂಸಿ ಸಂಯುಕ್ತಾಶ್ರಯದಲ್ಲಿ ‘ಸಂವಿಧಾನ ಅರಿವು ಮತ್ತು ಜಾಗೃತಿ’ ಕಾರ್ಯಕ್ರಮವು ಮಂಗಳವಾರ ಇಲ್ಲಿನ ಹಿ.ಪ್ರಾ. ಶಾಲೆಯಲ್ಲಿ ನಡೆಯಿತು.
ಈ ಸಂದರ್ಭ ದ.ಕ.ಜಿಪಂ ಸದಸ್ಯ ಯುಪಿ ಇಬ್ರಾಹೀಂ, ಮಿಫ್ಟ್ೃ ಕಾಲೇಜ್ ನಿರ್ದೇಶಕ ಎಂ.ಜಿ.ಹೆಗಡೆ, ಪತ್ರಕರ್ತ ಕಳಕೇಶ್ ಗೊರವರ, ಮುಸ್ತಫಾ ದೆಮ್ಮಲೆ, ಅಹ್ಮದ್ ಬಾವ, ಎ.ಕೆ. ಅಶ್ರಫ್, ಶೇಕ್ ಮೋನು, ಎಸ್ಡಿಎಂಸಿ ಅಧ್ಯಕ್ಷ ಸಿದ್ದೀಕ್ ಕೆಳಗಿನ ಕೆರೆ, ಎ.ಕೆ.ಹನೀಫ್, ಝಕರಿಯ ಶಾಹಿಕ್, ಮನ್ಸೂರ್, ಅಶ್ರಫ್ ನಡುಗುಡ್ಡೆ, ಹಬೀಬ್ ಕಟ್ಟಪುಣಿ, ನೌಫಲ್ ಗೋಳಿಪಡ್ಪು, ಅಡ್ಲೀನ್ ಕ್ಲೀಟಾ ಡಿಸೋಜ, ಬಶೀರ್ ಸಾಗರ್ ಮತ್ತಿತರರು ಉಪಸ್ಥಿತರಿದ್ದರು.
ಫಾರೂಕ್ ಕೆಳಗಿನಕೆರೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
Next Story