ಎಸೆಸೆಲ್ಸಿ : ಜ.29ರಂದು ಕನ್ನಡ ವಿಷಯದಲ್ಲಿ ಫೋನ್ ಇನ್ ಕಾರ್ಯಕ್ರಮ
ಉಡುಪಿ, ಜ.28: ಎಸೆಸೆಲ್ಸಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗಾಗಿ ಜ.29ರ ಶುಕ್ರವಾರ ಸಂಜೆ 5:00ರಿಂದ 7:00ರವರೆಗೆ ವಿದ್ಯಾರ್ಥಿಗಳ ಶೈಕ್ಷಣಿಕ ಬಲವರ್ಧನೆಗಾಗಿ ಎಸೆಸೆಲ್ಸಿ ಪ್ರಥಮ ಭಾಷೆ ಕನ್ನಡ ವಿಷಯಕ್ಕೆ ಸಂಬಂಧಿಸಿದಂತೆ ಫೋನ್ ಇನ್ ಕಾರ್ಯಕ್ರಮವನ್ನು ಕಾರ್ಕಳ ತಾಲೂಕು ಬೈಲೂರಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಲಾಗಿದೆ.
ಜಿಲ್ಲೆಯ ಎಸೆಸೆಲ್ಸಿ ವಿದ್ಯಾರ್ಥಿಗಳು ಪ್ರಥಮ ಭಾಷೆ ಕನ್ನಡ ವಿಷಯದಲ್ಲಿ ಇರುವ ಕಲಿಕಾ ಸಮಸ್ಯೆಗಳಿಗೆ ಈ ಕೆಳಗಿನ ದೂರವಾಣಿ ನಂಬರ್ಗಳಿಗೆ ಕರೆ ಮಾಡಿ ಪ್ರಶ್ನೆಗಳನ್ನು ಕೇಳಿ ಪರಿಹಾರ ಪಡೆದುಕೊಳ್ಳಬಹುದು. ಜಿಲ್ಲೆಯ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಎಲ್ಲಾ ಪ್ರೌಢ ಶಾಲೆಗಳ ವಿದ್ಯಾರ್ಥಿಗಳಿಗೆ ಈ ಬಗ್ಗೆ ಮಾಹಿತಿಗಳನ್ನು ನೀಡಲಿದ್ದಾರೆ.
ವಿದ್ಯಾರ್ಥಿಗಳ ಪಾಲಕರು ಹಾಗೂ ಸಾರ್ವಜನಿಕರು ಸಹ ಕರೆ ಮಾಡಿ ಪರೀಕ್ಷಾ ಸಿದ್ದತೆ ಮತ್ತಿತರ ಶೈಕ್ಷಣಿಕ ಸಮಸ್ಯೆಗಳ ಕುರಿತು ಡಿಡಿಪಿಐ ಅವರ ನಂಬರ್ಗೆ ಕರೆ ಮಾಡಿ ಪ್ರಶ್ನೆಗಳನ್ನು ಕೇಳಬಹುದು. ಕರೆ ಮಾಡಬೇಕಾದ ನಂಬರ್ಗಳು ಹೀಗಿವೆ.
ವಿದ್ಯಾರ್ಥಿಗಳ ಪಾಲಕರು ಹಾಗೂ ಸಾರ್ವಜನಿಕರು ಸಹ ಕರೆ ಮಾಡಿ ಪರೀಕ್ಷಾ ಸಿದ್ದತೆ ಮತ್ತಿತರ ಶೈಕ್ಷಣಿಕ ಸಮಸ್ಯೆಗಳ ಕುರಿತು ಡಿಡಿಪಿಐ ಅವರ ನಂಬರ್ಗೆ ಕರೆ ಮಾಡಿ ಪ್ರಶ್ನೆಗಳನ್ನು ಕೇಳಬಹುದು. ಕರೆ ಮಾಡಬೇಕಾದ ನಂಬರ್ಗಳು ಹೀಗಿವೆ. ನಿರ್ಮಲಾ: 9448548139, ಸುಪ್ರಿಯಾ: 9481014917, ಪವಿತ್ರಾ: 9164692781, ಶಿವಸುಬ್ರಮಣ್ಯ ಭಟ್: 9482654861, ಸುಬ್ರಮಣ್ಯ ಉಪಾಧ್ಯ: 9449592771, ಪ್ರಭಾಕರ ಶೆಟ್ಟಿ: 9901190252, ಗಣೇಶ ಜಾಲ್ಲೂರು: 9481214438, ದೇವದಾಸ ಕೆರೆಮನೆ: 8277061304, ರಮೇಶ್: 9481014917, ರಾಜೀವ್: 9449592771.
ಉಡುಪಿ ಡಿಡಿಪಿಐ ಎನ್.ಎಚ್.ನಾಗೂರ: 9448999353. ಕಾರ್ಕಳ ತಾಲೂಕು ಬಿಇಓ ಶಶಿಧರ ಜಿ.ಎಸ್.:9480695373