ಮಗನನ್ನು ಕಾಲೇಜಿಗೆ ಸೇರಿಸಲು ಬಂದ ತಂದೆ ಮೃತ್ಯು
ಮಣಿಪಾಲ, ಫೆ.19: ಮಗನನ್ನು ಮಣಿಪಾಲ ಎಂಐಟಿ ಕಾಲೇಜಿಗೆ ದಾಖಲಿಸಲು ಬಂದಿದ್ದ ತಂದೆ ಹೃದಯಾಘಾತದಿಂದ ಮೃತಪಟ್ಟ ಘಟನೆ ಫೆ.18 ರಂದು ರಾತ್ರಿ ವೇಳೆ ನಡೆದಿದೆ.
ಮೃತರನ್ನು ಆಂಧ್ರಪ್ರದೇಶ ರಾಜ್ಯದ ವಿಜಯವಾಡದ ಪಿ.ರವಿ ಪ್ರಸಾದ್(52) ಎಂದು ಗುರುತಿಸಲಾಗಿದೆ. ಇವರು ತನ್ನ ಮಗ ಪಿ.ಮನೀಶ್ನನ್ನು ಎಂಐಟಿ ಕಾಲೇಜಿಗೆ ದಾಖಲಿಸಲು ಬಂದಿದ್ದು, ಈ ವೇಳೆ ಅವರು ಹೃದಯಾಘಾತ ದಿಂದ ಮೃತಪಟ್ಟಿದ್ದಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story