ಕೊಣಾಜೆ : ಮನೆಯ ಕಿಟಕಿಯ ಗಾಜು, ಕಾರಿಗೆ ಕಲ್ಲೆಸೆದ ದುಷ್ಕರ್ಮಿಗಳು
ಕೊಣಾಜೆ : ವಿದ್ಯಾನಗರ ಜಲ್ಲಿ ಕ್ರಾಸ್ ಬಳಿ ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ಎರಡು ಕಾರು ಹಾಗೂ ಮನೆಯ ಕಿಟಕಿ ಗಾಜುಗಳನ್ನು ದುಷ್ಕರ್ಮಿಗಳು ಕಲ್ಲೆಸೆದು ಪುಡಿಮಾಡಿ ವಿಕೃತಿ ಮೆರೆದ ಘಟನೆ ಗುರುವಾರ ನಡೆದಿದೆ.
ಜಲ್ಲಿ ಕ್ರಾಸ್ ನ ಹಾಜಿ ಅಬ್ಬಾಸ್ ಅವರ ಮನೆಯ ಅಂಗಳದಲ್ಲಿ ನಿಲ್ಲಿಸಿದ ಒಂದು ಕ್ವಾಲಿಸ್ ಮತ್ತು ಓಮಿನಿ ಕಾರಿಗೆ ಇಂದು ಬೆಳಗ್ಗೆ ಸುಮಾರು ಮೂರು ಮಂದಿ ಅಂಗಳಕ್ಕೆ ನುಗ್ಗಿ ಡೊಡ್ಡ ಗಾತ್ರದ ಜಲ್ಲಿ ಕಲ್ಲುಗಳನ್ನು ಕಾರು, ಮನೆಯ ಕಿಟಕಿ ಗಾಜಿಗೆ ಎಸೆದು ಹಾನಿಗೊಳಿಸಿರುವುದಾಗಿ ದೂರಲಾಗಿದೆ.
ಗಾಜು ಪುಡಿಯಾಗುತ್ತಿರುವ ಶಬ್ಧಕ್ಕೆ ಮಾನೆಯ ಮಾಲೀಕ ಹಾಗೂ ಪಕ್ಕದ ಮನೆಯವರು ಎಚ್ಚರಗೊಂಡಿದ್ದು ಎದ್ದು ಕಿಟಕಿ ಮೂಲಕ ಇಣುಕಿ ನೋಡಿದಾಗ ಮೂರು ಮಂದಿ ವ್ಯಕ್ತಿಗಳನ್ನು ಕಂಡಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಕೊಣಾಜೆ ಠಾಣೆ ಪೊಲೀಸರು ಸಮೀಪದ ಸಿಸಿಟಿವಿ ಫೂಟೇಜ್ ಪರಿಶೀಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ.
Next Story