ಎಸ್ಸೆಸ್ಸೆಫ್ ಮುಡಿಪು ಡಿವಿಶನ್ ವತಿಯಿಂದ ESPOLEAR ಕ್ಯಾಂಪ್
ಮುಡಿಪು: ಎಸ್ಸೆಸ್ಸೆಫ್ ಮುಡಿಪು ಡಿವಿಶನ್ ಆಯೋಜಿಸಿದ ESPOLEAR ಕ್ಯಾಂಪ್ ಡಿವಿಶನ್ ಅಧ್ಯಕ್ಷ ಮನ್ಸೂರ್ ಹಿಮಮಿಯವರ ನೇತೃತ್ವದಲ್ಲಿ ಮೋಂಟುಗೋಳಿಯಲ್ಲಿ ಯಶಸ್ವಿಯಾಗಿ ಜರಗಿತು.
ಗೌಸಿಯಾ ಜುಮಾ ಮಸ್ಜಿದ್ ಮೋಂಟುಗೋಳಿ ಖತೀಬ್ ಸಲೀಮ್ ಸಹದಿ ಹೊನ್ನಾವರ ದುಆ ನೆರವೇರಿಸಿದರು, ಮಸ್ಜಿದ್ ಅಧ್ಯಕ್ಷ ಸುಲೈಮಾನ್ ರವರು ಧ್ವಜಾರೋಹಣಗೈದರು. ಎಸ್.ವೈ.ಎಸ್ ಕರ್ನಾಟಕ ರಾಜ್ಯಾಧ್ಯಕ್ಷ ಉಸ್ಮಾನ್ ಸಅದಿ ಪಟ್ಟೋರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ನಂತರ ಎಸ್ಸೆಸ್ಸೆಫ್ನ ಗತಕಾಲದ ಚರಿತ್ರೆ, ನಾಯಕತ್ವ ಹಾಗೂ ತರ್ಬಿಯ ಎಂಬ ಮೂರು ವಿಷಯಗಳಲ್ಲಿ ಕ್ರಮವಾಗಿ ಕರ್ನಾಟಕ ಎಸ್.ವೈ.ಎಸ್ ನಾಯಕ ಜಿ.ಎಮ್ ಖಾಮಿಲ್ ಸಖಾಫಿ, ಕೇರಳ ಎಸ್.ವೈ.ಎಸ್ ನಾಯಕ ಅಬ್ದುಲ್ ಕಲಾಂ ಮಾಸ್ಟರ್ ಮಾವೂರು ಹಾಗೂ ರಶೀದ್ ಮಾಸ್ಟರ್ ನರಿಕ್ಕೋಡು ತರಗತಿಯನ್ನು ನಡೆಸಿದರು.
ಎಸ್ಸೆಸ್ಸೆಫ್ ರಾಷ್ಟ್ರೀಯ ಸಮಿತಿ ಸದಸ್ಯರಾದ ಕೆ.ಎಮ್ ಅಬೂಬಕ್ಕರ್ ಸಿದ್ದೀಖ್ ಮೋಂಟುಗೋಳಿ, ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಪ್ರ.ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ , ದ.ಕ ವೆಸ್ಟ್ ಜಿಲ್ಲಾಧ್ಯಕ್ಷರಾದ ಮುನೀರ್ ಸಖಾಫಿ ಉಳ್ಳಾಲ, ಕಾರ್ಯದರ್ಶಿ ಇಬ್ರಾಹಿಮ್ ಅಹ್ಸನಿ ಮಂಜನಾಡಿ, ಅಲ್ ಮದೀನಾ ಜನರಲ್ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ ಮೊದಲಾದವರು ಆಶಂಸ ಭಾಷಣ ಮಾಡಿದರು.
ದ.ಕ. ವೆಸ್ಟ್ ಜಿಲ್ಲೆ ಪ್ರ. ಕಾರ್ಯದರ್ಶಿ ಹೈದರಲಿ ಕಾಟಿಪಳ್ಳ, ಕೋಶಾಧಿಕಾರಿ ಇಕ್ಬಾಲ್ ಮಧ್ಯನಡ್ಕ ಡಿವಿಶನ್ ಉಸ್ತುವಾರಿ ಆಬಿದ್ ನಈಮಿ, ಸಾಮಣಿಗೆ ಮಹಮ್ಮದ್ ಮದನಿ, ಶರೀಫ್ ಮುಡಿಪು, ಅಝೀಝ್ ಹೆಚ್.ಕಲ್, ಮಜೀದ್ ಮಂಜನಾಡಿ, ಕ್ಯಾಂಪ್ ಚೇರ್ ಮಾನ್ ಮಸ್ಹೂದ್ ಬಾಹಸನಿ ಹಾಗೂ ಇನ್ನಿತರ ಧಾರ್ಮಿಕ ,ಸಾಮಾಜಿಕ ನಾಯಕರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಹಲವು ಗಣ್ಯವ್ಯಕ್ತಿಗಳನ್ನು ಸನ್ಮಾನಿಸಲಾಯಿತು. ಕ್ಯಾಂಪ್ ಕನ್ವೀನರ್ ನೌಫಲ್ ಫರೀದ್ ನಗರ ಸ್ವಾಗತಿಸಿದರು. ಡಿವಿಶನ್ ಪ್ರ.ಕಾರ್ಯದರ್ಶಿ ನೌಷಾದ್ ಮದನಿ ಹೆಚ್.ಕಲ್ ವಂದಿಸಿದರು