ಪ್ರತ್ಯೇಕ ಜುಗಾರಿ ಪ್ರಕರಣ : 21 ಮಂದಿ ಬಂಧನ
ಕಾಪು, ಮಾ.8: ಮೂಡಬೆಟ್ಟು ಗ್ರಾಮದ ಶಿವಾನಂದ ನಗರದ ಬಬ್ಬುಸ್ವಾಮಿ ದೈವಸ್ಥಾನದ ಸಮೀಪ ಮಾ.7ರಂದು ಬೆಳಗಿನ ಜಾವ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದ 16 ಮಂದಿಯನ್ನು ಕಾಪು ಪೊಲೀಸರು ಬಂಧಿಸಿದ್ದಾರೆ.
ಭುಜಂಗ, ಶೇಖರ ಮೊಯಿಲಿ, ಸಂಜೀವ ಮೊಯಿಲಿ, ಶ್ರೀಶ, ಕಿಟ್ಟ, ಪ್ರಕಾಶ, ನಾರಾಯಣ, ಮುಬಾರಕ್, ಅಣ್ಣಪ್ಪ, ರಂಜಿತ್, ತನುಜಯ, ಅತೀಶ್, ರಮೇಶ, ಪ್ರಜ್ವಲ್ ಪೂಜಾರಿ, ಯತೀಶ್ ಕುಮಾರ, ಶರತಕುಮಾರ ಬಂಧಿತ ಆರೋಪಿಗಳು. ಇವರಿಂದ ಒಟ್ಟು 13ಮೊಬೈಲ್, 16,375ರೂ. ನಗದು, 7 ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇವುಗಳ ಒಟ್ಟು ಮೌಲ್ಯ 1,69,375ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಕಳ: ಕಾರ್ಕಳ ಬಿಬಿಎಂ ಕಾಲೇಜು ಬಳಿ ಮಾ.7ರಂದು ಇಸ್ಪೀಟ್ ಜುಗಾರಿ ಆಡುತ್ತಿದ್ದ ಅಬ್ದುಲ್ ರೆಹಮಾನ್, ಕುಟ್ಟಿ ಶೆಟ್ಟಿ, ಹೇಮಂತ್, ಅಶೋಕ ಹೆಗ್ಡೆ, ಸುಕೇಶ ಎಂಬವರನ್ನು ಪೊಲೀಸರು ಬಂಧಿಸಿ, 2400ರೂ. ನಗದು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story