ಮಂಗಳೂರು : ರಚನಾ ಸರ್ವ ಸದಸ್ಯರ ಸಭೆ
ಮಂಗಳೂರು : ರಚನಾ ಕ್ಯಾಥೋಲಿಕ್ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿಯ ಸರ್ವ ಸದಸ್ಯರು ಸಭೆಯು ಬೆಂದೂರಿನ ಸೈಂಟ್ ಸೆಬಾಸ್ಟಿಯನ್ ಚರ್ಚ್ ಕಮ್ಯುನಿಟಿ ಹಾಲ್ನಲ್ಲಿ ಇತ್ತೀಚೆಗೆ ನಡೆಯಿತು.
ರಚನಾ ಅಧ್ಯಕ್ಷ ಎಲಿಯಾಸ್ ಸಾಂಕ್ತಿಸ್ ಸ್ವಾಗತಿಸಿದರು. ಅತಿಥಿ ಸ್ಪೀಕರ್ ಸಿಎ ಎಸ್.ಎಸ್.ನಾಯಕ್ ಅವರನ್ನು ಉಪಾಧ್ಯಕ್ಷ ವಿನ್ಸೆಂಟ್ ಕಟಿನ್ಹೊ ಸಭೆಗೆ ಪರಿಚಯಿಸಿದರು. ನಂತರ ಎಸ್.ಎಸ್.ನಾಯಕ್ ಅವರು ಕೇಂದ್ರ ಬಜೆಟ್ 2021 ರ ಮುಖ್ಯಾಂಶಗಳನ್ನು ವಿವರಿಸಿದರು.
ಮಹಿಳಾ ದಿನಾಚರಣೆಯ ಅಂಗವಾಗಿ ಹಾಜರಿದ್ದ ಮಹಿಳೆಯರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ರಚನಾ ಮಾಜಿ ಅಧ್ಯಕ್ಷ ಜಾನ್ ಮೊಂತೇರೊ ಅವರು ಸಂಯೋಜಿಸಿದರು, ಅಧ್ಯಕ್ಷರಾದ ಎಲಿಯಾಸ್ ಸಾಂಕ್ತಿಸ್, ಕಾರ್ಯದರ್ಶಿ ನೆಲ್ಸನ್ ಮೊಂತೇರೊ, ಖಜಾಂಚಿ ಫೆಲಿಕ್ಸ್ ಪಿಂಟೊ ಮತ್ತು ಎಸ್.ಎಸ್. ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯದರ್ಶಿ ನೆಲ್ಸನ್ ಮೊಂತೇರೊ ವಂದಿಸಿದರು.
Next Story