ಎಸ್ ವೈ ಎಸ್ ಕರ್ನಾಟಕ ಮುಖ್ಯ ಸಂಚಾಲಕರಾಗಿ ಅಬ್ದುಲ್ ಅಝೀಝ್ ದಾರಿಮಿ ನೇಮಕ
ಮಂಗಳೂರು: ಸುನ್ನೀ ಯುವ ಜನ ಸಂಘ ಕೇಂದ್ರ ಸಮಿತಿಯು ಸಂಘಟನೆಯ ಕಾರ್ಯಕ್ರಮಗಳನ್ನು ಏಕೀಕೃತಗೊಳಿಸುವ ನಿಮಿತ್ತ ವಲಯ ಸಂಚಾಲಕರನ್ನು ನೇಮಕ ಮಾಡಿದೆ.
ಕರ್ನಾಟಕ ಮುಖ್ಯ ಸಂಚಾಲಕರಾಗಿ ಮೌಲಾನಾ ಅಬ್ದುಲ್ ಅಝೀಝ್ ದಾರಿಮಿಯವರನ್ನು ನೇಮಕ ಮಾಡಲಾಗಿದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.
ರಾಜ್ಯ ದಾರಿಮಿ ಉಲಮಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾಗಿಯೂ ಶಂಸುಲ್ ಉಲಮಾ ಮೆಮೋರಿಯಲ್ ದಾರುಸ್ಸಲಾಮ್ ಅಕಾಡಮಿ ಮಂಗಳ ನಗರ ಇದರ ಪ್ರಧಾನ ಕಾರ್ಯದರ್ಶಿಯಾಗಿಯೂ ಎಸ್ ವೈ ಎಸ್ ಜಿಲ್ಲಾ ಅದ್ಯಕ್ಷರಾಗಿಯೂ ಅಬ್ದುಲ್ ಅಝೀಝ್ ದಾರಿಮಿ ಕಾರ್ಯ ನಿರ್ವಹಿಸುತ್ತಿದ್ದಾರೆ.
Next Story