ರಾಜ್ಯ ಹೆದ್ದಾರಿಗೆ ಟೋಲ್ ನಿರ್ಮಾಣಕ್ಕೆ ಯುವ ಕಾಂಗ್ರೆಸ್ ವಿರೋಧ
ಪಡುಬಿದ್ರಿ : ರಾಜ್ಯ ಹೆದ್ದಾರಿ ಪಡುಬಿದ್ರಿ ಕಂಚಿನಡ್ಕ ಭಾಗದಲ್ಲಿ ಟೋಲ್ ನಿರ್ಮಾಣವನ್ನು ಕ್ಯೆಬಿಡದಿದ್ದಲ್ಲಿ ರಾಜ್ಯ ಸರಕಾರದ ವಿರುದ್ಧ ಉಗ್ರ ಹೋರಾ ನಡೆಸಲಾಗುವುದು. ಯಾವುದೇ ಕಾರಣಕ್ಕೂ ಈ ಭಾಗದಲ್ಲಿ ಟೋಲ್ ನಿರ್ಮಾಣ ಮಾಡಲು ಬಿಡುವುದಿಲ್ಲ ಎಂದು ಕಾಪು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ರಮೀಜ್ ಹುಸೇನ್ ಸಂಪೂರ್ಣ ವಿರೋಧ ವ್ಯಕ್ತ ಪಡಿಸಿದರು.
ಪಡುಬಿದ್ರಿ- ಕಾರ್ಕಳ ರಾಜ್ಯ ಹೆದ್ದಾರಿಯ ಕಂಚಿನಡ್ಕ ಭಾಗದಲ್ಲಿ ರಾಜ್ಯ ಸರಕಾರ ಟೋಲ್ ಗೇಟ್ ನಿರ್ಮಾಣ ಮಾಡುವ ಯೋಜನೆಯಲ್ಲಿದ್ದು. ಇದೀಗಲೇ ಪಡುಬಿದ್ರಿಯ ಜನತೆ ಮಂಗಳೂರು ಹೋಗಬೇಕಾದರೇ ಹೆಜಮಾಡಿ ಹಾಗು ಸುರತ್ಕಲ್ ಟೋಲ್ ಪಾವತಿಸುತಿದ್ದಾರೆ. ಇದು ಗಾಯದ ಮೇಲೆ ಬರೇ ಎಳೆದಂತೆ ಅಗಿದೆ. ಕೂರೋನದಿಂದ ಜನರ ಅರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು ಈ ಸಂದರ್ಭದಲ್ಲಿ ರಾಜ್ಯ ಸರಕಾರ ಇಂತಹ ನಿಲುವು ತೆಗೆದು ಕೂಂಡರೆ ಜನ ಸಂಚಾರಿಸುವುದೆ ಕಷ್ಟಕರವಾಗಿದೆ. ಇದೀಗಲೇ ರಾಜ್ಯ ಸರಕಾರದ ಟೋಲ್ ಸುಂಕ ಹೆಚ್ಚಳದಿಂದ ಜನ ರೊಚ್ಚಿಗೆದ್ದಿದಾರೆ ಎಂದು ಅವರು ತಿಳಿಸಿದ್ದಾರೆ.
Next Story