ಕುಂದಾಪುರ: ಮುಷ್ಕರದ ಮಧ್ಯೆ ಬಸ್ ಓಡಿಸಿದ ಚಾಲಕನಿಗೆ ಬೆದರಿಕೆ; ಆರೋಪ
ಕುಂದಾಪುರ, ಎ.10: ಕೆಎಸ್ಆರ್ಟಿಸಿ ಬಸ್ ನೌಕರರ ಮುಷ್ಕರದ ಮಧ್ಯೆ ಬಸ್ ತೆಗೆದ ಬಸ್ ನೌಕರರೊಬ್ಬರಿಗೆ ಸಹೋದ್ಯೋಗಿ ಜೀವಬೆದರಿಕೆಯೊಡ್ಡಿರುವ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೊನ್ನಾವರದ ನಾಗರಾಜ ಎಂ.ನಾಯ್ಕ್(53) ಎಂಬವರು ಎ.7ರಂದು ರಾತ್ರಿ ಬಸ್ಸನ್ನು ಕುಂದಾಪುರದಿಂದ ಮೈಸೂರಿಗೆ ಚಲಾಯಿಸಿಕೊಂಡು ಹೋಗಲು ಕುಂದಾಪುರ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ತಂದು ನಿಲ್ಲಿಸಿದ್ದರು. ಆಗ ಕೆಎಸ್ಆರ್ಟಿಸಿ ಕುಂದಾಪುರ ಡಿಪೋದ ಚಾಲಕನಾಗಿರುವ ಸಹದ್ಯೋಗಿ ರವಿ ಎಂಬಾತ, ನಾಗರಾಜ್ಗೆ ಕರೆ ಮಾಡಿ ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
Next Story