ಬೈಂದೂರು: ಮನೆ ಮೇಲೆ ಮರ ಬಿದ್ದು ಹಾನಿ
ಉಡುಪಿ, ಎ.15: ಬೈಂದೂರು ತಾಲೂಕು ಮುಧೂರು ಗ್ರಾಮದ ನಾರಾಯಣ ನಾಯ್ಕ ಎಂಬವರ ಮನೆ ಮೇಲೆ ಭಾರೀ ಗಾತ್ರದ ಮರವೊಂದು ಬುಧವಾರ ರಾತ್ರಿಯ ಗಾಳಿ-ಮಳೆಗೆ ಬಿದ್ದು ಭಾಗಶ: ಹಾನಿಯಾಗಿದ್ದು, 50 ಸಾವಿರ ರೂ.ಗಳಿಗೂ ಅಧಿಕ ನಷ್ಟ ಉಂಟಾಗಿರುವ ಬಗ್ಗೆ ವರದಿಯಾಗಿದೆ.
ಅದೇ ರೀತಿ ನಾಡ ಗ್ರಾಮದ ಸುರೇಶ್ ಎಂಬವರ ಮನೆಯ ಮೇಲೂ ಮರವೊಂದು ಬಿದ್ದು ಭಾಗಶ: ಹಾನಿಯಾಗಿದ್ದು 20,000ರೂ.ನಷ್ಟದ ಅಂದಾಜು ಮಾಡಲಾಗಿದೆ. ಕೆರ್ಗಾಲು ಗ್ರಾಮದ ಮಂಜು ದೇವಾಡಿಗರ ದನದ ಕೊಟ್ಟಿಗೆ ನಿನ್ನೆಯ ಗಾಳಿಮಳೆಯಿಂದ ಸಂಪೂರ್ಣ ಹಾನಿಗೊಂಡಿದ್ದು 25000ರೂ. ನಷ್ಟದ ಅಂದಾಜು ಮಾಡಲಾಗಿದೆ.
ಕೆರ್ಗಾಲು ಗ್ರಾಮದ ತಿಮ್ಮ ಎಂಬವರ ವಾಸ್ತವ್ಯದ ಮನೆಯ ಮೇಲೆ ಅಡಿಕೆ ಮರ ಬಿದ್ದು 25ಸಾವಿರ ರೂ.ನಷ್ಟ ಉಂಟಾಗಿದೆ. ಬೈಂದೂರು ತಾಲೂಕಿನಲ್ಲಿ ಕಳೆದ 24 ಗಂಟೆಗಳಲ್ಲಿ 10 ಮಿ.ಮೀ. ಮಳೆ ಸುರಿದಿದೆ. ಅದೇ ರೀತಿ ಹೆಬ್ರಿಯಲ್ಲಿ 6, ಕಾರ್ಕಳದಲ್ಲಿ 5, ಕಾಪುವಲ್ಲಿ 5 ಹಾಗೂ ಉಡುಪಿಯಲ್ಲಿ 2 ಮಿ.ಮೀ. ಮಳೆಯಾದ ಬಗ್ಗೆ ವರದಿಗಳು ಬಂದಿವೆ.
Next Story