ರಸ್ತೆಯ ಡಾಮಾರಿಕರಣ ಕೆಲಸಕ್ಕೆ ಸಂಬಂಧಿಸಿ ನಿಲ್ಲಿಸಿದ್ದ ಡಿಸೇಲ್ ಮೋಟಾರ್ ಕಳವು
ಶಂಕರನಾರಾಯಣ, ಎ.18: ಹೆಂಗವಳ್ಳಿ ರಸ್ತೆಯ ಡಾಮಾರಿಕರಣ ಕೆಲಸಕ್ಕೆ ಸಂಬಂಧಿಸಿ ನಿಲ್ಲಿಸಿದ್ದ ಸಾವಿರಾರು ರೂ. ಮೌಲ್ಯದ ಕಿಲೋಸ್ಕರ್ ಕಂಪೆನಿಯ ಡಿಸೇಲ್ ಮೋಟಾರ್ ಕಳವು ಮಾಡಿರುವ ಘಟನೆ ಎ.3ರಂದು ರಾತ್ರಿ ವೇಳೆ ನಡೆದಿದೆ.
ರಸ್ತೆಯ ಡಾಮಾರಿಕರಣ ಕೆಲಸ ಮಾಡಿ ರಸ್ತೆಯ ಬದಿಯಲ್ಲಿ ಡಾಮಾರು ಸ್ಪ್ರೇ ಮಾಡಲು ಉಪಯೋಗಿಸುವ ಬಾಯ್ಲರ್ ಮೇಶಿನ್ ನಿಲ್ಲಿಸಿದ್ದು, ಈ ಮೆಶೀನಿಗೆ ಅಳವಡಿಸಿದ 50,000ರೂ. ಮೌಲ್ಯದ ಕಿಲೋಸ್ಕರ್ ಕಂಪೆನಿಯ ಡಿಸೇಲ್ ಮೋಟಾರ್ ಕಳವು ಮಾಡಲಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story