ಅಲ್ ಮದನಿ ಹೆಲ್ಪ್ ಡೆಸ್ಕ್ ವತಿಯಿಂದ ಹಣ್ಣು ಹಂಪಲು ವಿತರಣೆ
ಉಡುಪಿ, ಮೇ 16: ಈದುಲ್ ಫಿತ್ರ್ ಪ್ರಯುಕ್ತ ಅಲ್ ಮದನಿ ಹೆಲ್ಪ್ ಡೆಸ್ಕ್ ವತಿಯಿಂದ ಉಡುಪಿಯ ಅಜ್ಜರಕಾಡಿನಲ್ಲಿರುವ ಕೊರೋನ ರೋಗಿಗಳಿಗೆ ಹಾಗೂ ನಗರದಲ್ಲಿರುವ ನಿರ್ಗತಿಕರಿಗೆ ಮತ್ತು ಕೊರೊನ ವಾರಿಯರ್ಸ್ ಪೊಲೀಸರಿಗೆ ಹಣ್ಣು ಹಂಪಲುಗಳನ್ನು ವಿತರಿಸಲಾಯಿತು.
ಉಡುಪಿ ಜಿಲ್ಲಾಸ್ಪತ್ರೆ ವೈದ್ಯಾಧಿಕಾರಿಗಳಿಗೆ ಎನ್.ಎ.ನೌಫಲ್ ಮದನಿ ನೇಜಾರ್ ಹಣ್ಣು ಹಂಪಲುಗಳನ್ನು ಹಸ್ತಾಂತರಿಸುವ ಮೂಲಕ ಈ ಕಾರ್ಯ ಕ್ರಮಕ್ಕೆ ಚಾಲನೆ ನೀಡಲಾಯಿತು.
ಬಳಿಕ ಉಡುಪಿ ನಗರ, ಅಂಬಾಗಿಲು, ಸಂತೆಕಟ್ಟೆ, ಮುಂತಾದ ಕಡೆಗಳಲ್ಲಿ ಹಣ್ಣು ಹಂಪಲು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಅಲ್ ಮದನಿ ಹೆಲ್ಪ್ ಡೆಸ್ಕ್ ಇದರ ನಿಸಾರ್ ಕುಂದಾಪುರ, ತನ್ ಶೀರ್ ಮಾವಿನಕಟ್ಟೆ, ತೌಫೀಕ್ ಮಾವಿನಕಟ್ಟೆ, ಅಝೀಮ್ ಕುಂದಾಪುರ ಮೊದ ಲಾದವರು ಉಪಸ್ಥಿತರಿದ್ದರು.
Next Story