ದ.ಕ. ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಸತತ 60 ದಿನಗಳಿಂದ ಊಟ ವಿತರಣೆ
ಮಂಗಳೂರು : ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ್ ನೇತೃತ್ವದಲ್ಲಿ ರವಿವಾರ ನಗರದ ನಿರ್ಗತಿಕರು, ಭಿಕ್ಷುಕರು ಹಾಗೂ ಆಸ್ಪತ್ರೆಯಲ್ಲಿರುವ ಕೋವಿಡ್ ರೋಗಿಗಳ ಸಂಬಂಧಿಕರು ಸೇರಿದಂತೆ ಸುಮಾರು 500ಕ್ಕೂ ಅಧಿಕ ಮಂದಿಗೆ ಉಚಿತ ಊಟ ವಿತರಿಸುವುದರೊಂದಿಗೆ ಸತತ 60 ದಿನಗಳ ಊಟ ವಿತರಣಾ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ಮನಪಾ ಸದಸ್ಯರಾದ ಅಬ್ದುಲ್ ರವೂಫ್, ನವೀನ್ ಡಿಸೋಜ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಟಿ.ಕೆ. ಸುಧೀರ್, ಗಣೇಶ್ ಪೂಜಾರಿ, ರಮಾನಂದ ಪೂಜಾರಿ, ಜಿಲ್ಲಾ ಕಚೇರಿ ಕಾರ್ಯದರ್ಶಿ ನಝೀರ್ ಬಜಾಲ್, ಆಶಿತ್ ಜಿ. ಪಿರೇರಾ, ಆರೀಫ್ ಬಾವ ಬಂದರ್, ಸಿ.ಎಂ. ಮುಸ್ತಫ, ಸೌಹಾನ್ ಎಸ್.ಕೆ., ಸಂಜನಾ ಚಲವಾದಿ, ಹಸನ್ ಪಳ್ನಿರ್, ರಾಜೇಶ್ ಬೆಂಗ್ರೆ, ಅಲ್ಫಾಝ್ ಪಾಂಡೇಶ್ವರ, ಮೀನಾ ಟೆಲ್ಲೀಸ್, ಅಸೀಫ್ ಜಪ್ಪು, ಯೂಸುಫ್ ಉಚ್ಚಿಲ್, ಫಯಾಝ್ ಅಮ್ಮೆಮ್ಮಾರ್ ಮತ್ತಿತರರು ಉಪಸ್ಥಿತರಿದ್ದರು.