ಗುಂಡುಕಲ್ಲು ಮಸೀದಿ ಅಧ್ಯಕ್ಷರಾಗಿ ಅಬ್ದುಲ್ ರೆಹಮಾನ್
ಮೂಡಬಿದಿರೆ, ಜು. 26: ಬೆಳುವಾಯಿ ಗುಂಡುಕಲ್ಲು ಮುಹಿಯ್ಯುದ್ದೀನ್ ಜುಮ್ಮಾ ಮಸೀದಿಯ ನೂತನ ಅಧ್ಯಕ್ಷರಾಗಿ ಎಂ.ಅಬ್ದುಲ್ ರೆಹಮಾನ್ ಆಯ್ಕೆಯಾಗಿದ್ದಾರೆ.
ಜು.25ರಂದು ನಡೆದ ಮಹಾಸಭೆಯಲ್ಲಿ ಮಸೀದಿಯ ಆಡಳಿತ ಕಮಿಟಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಅಬ್ದುಲ್ ಸಲಾಂ ಮದನಿ, ಕಾರ್ಯದರ್ಶಿಯಾಗಿ ಸುಲೈಮಾನ್, ಸಹ ಕಾರ್ಯ ದರ್ಶಿಯಾಗಿ ಅಬ್ದುಲ್ ಕರೀಂ, ಖಜಾಂಚಿಯಾಗಿ ಮಯ್ಯದ್ದಿ, ಅಕೌಂಟೆಂಟ್ ಆಗಿ ಮುಹುಯ್ಯುದ್ದೀನ್ ಎಂ.ಎಚ್., ಸದಸ್ಯರುಗಳಾಗಿ ಎಚ್.ಮುಹಮ್ಮದ್, ಜಿ.ಮುಹಮ್ಮದ್, ಹನೀಫ್, ಇಸ್ಮಾಯಿಲ್, ಅಬ್ದುಲ್ ರಝಾಕ್ ಆಯ್ಕೆಯಾದರು.
Next Story