ಪಡುಬಿದ್ರಿ : ಮೂರು ಬಡಕುಟುಂಬಗಳಿಗೆ ನವೀಕೃತ ಮನೆ ಹಸ್ತಾಂತರ
ಪಡುಬಿದ್ರಿ : ಸಮಾಜ ಸೇವಕ ಕಟಪಾಡಿ ಶಶಿಧರ್ ಪುರೋಹಿತ್ ಅವರ ನೇತೃತ್ವದ ಗೃಹ ನವೀಕರಣ ಸಮಿತಿಯ ವತಿಯಿಂದ ಅಶಕ್ತ ಬಡ ಕುಟುಂಬದ ಪಡುಬಿದ್ರಿ ಅಬ್ಬೇಡಿಯ ಸುಜಾತಾ ಕೇಶವ ಆಚಾರ್ಯ, ಅದಮಾರಿನ ಯಶೋಧಾ ಶಿವರಾಮ ಆಚಾರ್ಯ, ಉಡುಪಿ ಪುತ್ತೂರು ಗರಡೆಯ ಸುಮತಿ ಚೆಲುವಯ್ಯ ಆಚಾರ್ಯ ಅವರ ನವೀಕೃತಗೊಳಿಸಿದ ಮನೆಯನ್ನು ಹಸ್ತಾಂತರಿಸಲಾಯಿತು
ಬಳಿಕ ಪ್ರತಿಕ್ರಿಯಿಸಿದ ಕಟಪಾಡಿ ಶಶಿಧರ್ ಪುರೋಹಿತ್, ಕೋವಿಡ್ ಸಂಕಷ್ಟ ಕಾಲದಲ್ಲಿ ಸುಮಾರು 600 ಕುಟುಂಬಗಳಿಗೆ ಆಹಾರದ ಕಿಟ್ ವಿತರಣೆಯ ಸಂದರ್ಭ ಈ ಅಶಕ್ತ ಬಡಕುಟುಂಬಗಳನ್ನು ಗುರುತಿಸಲಾಗಿತ್ತು. ಬಳಿಕ ಸಮಾನ ಮನಸ್ಕರ ತಂಡದೊಂದಿಗೆ ಈ ಮನೆಗಳನ್ನು ನವೀಕರಿಸಿ ವಾಸಕ್ಕೆ ಯೋಗ್ಯವಾಗಿಸಿ ಕೊಡುವ ನಿಟ್ಟಿನಲ್ಲಿ ಕಾರ್ಯ ರೂಪಕ್ಕಿಳಿದು ಇದೀಗ ಮೂರು ಬಡ ಅಶಕ್ತ ಕುಟುಂಬಗಳ ಜೀರ್ಣಗೊಂಡಿದ್ದ ಮನೆಗಳನ್ನು ನವೀಕರಣಗೊಳಿಸಿ ವಾಸ ಯೋಗ್ಯವಾಗಿಸಿ ಅವರಿಗೆ ಹಸ್ತಾಂತರಿಸಲಾಗಿದೆ ಎಂದಿದ್ದು, ಇನ್ನು ಮುಂದಕ್ಕೆ ನೈಜ ಸಂಕಷ್ಟವನ್ನು ಗುರುತಿಸಿ ಸಮಾಜಕ್ಕೆ ಮತ್ತಷ್ಟು ಆಸರೆಯಾಗುವ ಇಂಗಿತವನ್ನು ವ್ಯಕ್ತಪಡಿಸಿದರು.
ಈ ಸಂದರ್ಭ ಪಡುಕುತ್ಯಾರು ಸದಾಶಿವ ಎ. ಆಚಾರ್ಯ, ಮಾಧವ ಆಚಾರ್ಯ ಪುತ್ತೂರು, ದಾಮೋದರ ಆಚಾರ್ಯ ಉಡುಪಿ, ವಿಠ್ಠಲ ಆಚಾರ್ಯ ಪಣಿಯೂರು, ನಾಗರಾಜ ಆಚಾರ್ಯ ಪಣಿಯೂರು, ಕೇಶವ ಆಚಾರ್ಯ ಸಗ್ರಿ, ಪ್ರಕಾಶ ಆಚಾರ್ಯ ಇನ್ನಂಜೆ, ಸುದರ್ಶನ್ ಪುರೋಹಿತ್ ಪಡುಬಿದ್ರಿ, ರೋಹಿತಾಕ್ಷ ಪುರೋಹಿತ್ ಕೋಟೇಶ್ವರ, ಪ್ರಸಾದ್ ಪುರೋಹಿತ್ ಸಂಕಲಕರಿಯ, ಸತೀಶ್ ಆಚಾರ್ಯ ಪಡುಬಿದ್ರಿ, ವಾಸುದೇವ ಆಚಾರ್ಯ ಪರ್ಕಳ, ಪ್ರಕಾಶ ಆಚಾರ್ಯ ಪಡುಬಿದ್ರಿ, ಗಣೇಶ ಆಚಾರ್ಯ ಉಚ್ಚಿಲ, ಅರುಣ ಆಚಾರ್ಯ ಉಡುಪಿ, ವಿಜಯ ಆಚಾರ್ಯ ಪಡುಬಿದ್ರಿ, ಕಿಶೋರ್ ಆಚಾರ್ಯ ಕಟಪಾಡಿ, ರಾಜೇಶ್ ಆಚಾರ್ಯ ಬೆಳಪು, ಹರೀಶ ಆಚಾರ್ಯ ಕಳತ್ತೂರು ಹಾಗೂ ಫಲಾನುಭವಿ ಮನೆಮಂದಿ ಉಪಸ್ಥಿತರಿದ್ದರು