ಎನ್ಎಸ್ಯುಐನಿಂದ ರಕ್ತದಾನ ಶಿಬಿರ
ಮಂಗಳೂರು. ಆ.20: ಎನ್ಎಸ್ಯುಐ ರಾಷ್ಟ್ರೀಯ ಕಾರ್ಯದರ್ಶಿ ಎರಿಕ್ ಸ್ಠೀಫನ್, ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್, ರಾಜ್ಯ ಕಾರ್ಯದರ್ಶಿ ಫಾರೂಕ್ ಬಯಾಬೆಯವರ ನಿರ್ದೇಶನದಂತೆ ಎನ್ ಎಸ್ಯುಐ ದ.ಕ.ಜಿಲ್ಲಾ ಸಮಿತಿಯ ವತಿಯಿಂದ ಮಾಜಿ ಪ್ರಧಾನಿ ರಾಜೀವ್ ಗಾಂಧಿಯ ಹುಟ್ಟುಹಬ್ಬದ ಅಂಗವಾಗಿ ರಕ್ತದಾನ ಶಿಬಿರ ಕಾರ್ಯಕ್ರಮವು ನಗರದ ಲೇಡಿಗೋಶನ್ ಆಸ್ಪತ್ರೆಯಲ್ಲಿ ಶುಕ್ರವಾರ ನಡೆಯಿತು.
ಈ ಸಂದರ್ಭ ಎನ್ಎಸ್ಯುಐ ದ.ಕ. ಜಿಲ್ಲಾಧ್ಯಕ್ಷ ಸವಾದ್ ಸುಳ್ಯ, ರಾಜ್ಯ ಪ್ರಧಾನ ಕಾರ್ಯದರ್ಶಿ ಸುಹಾನ್ ಆಳ್ವ, ಯುವ ಮುಖಂಡ ಅನ್ಸಾರುದ್ದೀನ್ ಸಾಲ್ಮರ, ರಾಜ್ಯ ಸಂಯೋಜಕ ವಿನಯ್ ಕುಮಾರ್ ಸಿಂಧ್ಯಾ , ಶಾನ್ ಶಿರಿ, ಶೋನಿತ್ ಬಂಗೇರ, ನಿಖಿಲ್ ಶೆಟ್ಟಿ, ಅಬ್ದುಲ್ ರಾಝಿ, ನಜೀಬ್ ಮಂಚಿ ಕ್ರಿಸ್ಟನ್, ಅಯಾನ್, ಅಜಿತ್, ತುಶಾರ್ ಉಪಸ್ಥಿತರಿದ್ದರು.
Next Story