ಪ್ರವಾಹಕ್ಕೆ ಸಿಲುಕಿದ ದನವನ್ನು ರಕ್ಷಿಸಿದ ಯುವಕರು
ಬಂಟ್ವಾಳ, ಆ. 22: ತಾಲೂಕಿನ ನಾವೂರು ಗ್ರಾಮದ ಬಡಗುಂಡಿಯಲ್ಲಿ ಆ.21ರಂದು ಯುವಕರಾದ ರಕ್ಷಿತ್ ಮೈಂದಾಳ ಹಾಗೂ ಲೋಕೇಶ್ ನಾವೂರು ಎಂಬವರು ಪ್ರವಾಹದ ನೀರನ್ನೂ ಲೆಕ್ಕಿಸದೆ ಹೊಳೆಯ ಮಧ್ಯದಲ್ಲಿ ಸಿಲುಕಿದ್ದ ದನವೊಂದನ್ನು ಸ್ನೇಹಿತರ ಸಹಾಯದಿಂದ ರಕ್ಷಿಸಿ ದಡ ಸೇರಿಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಇಲ್ಲಿನ ನಿವಾಸಿ ಉಮೇಶ್ ಎಂಬವರು ಜಾನುವಾರುಗಳನ್ನು ಹೊಳೆಯ ಇನ್ನೊಂದು ಬದಿಗೆ ಮೇಯಲು ಬಿಟ್ಟಿದ್ದು ಈ ವೇಳೆ ಮಳೆಯಿಂದ ಹೊಳೆ ಯಲ್ಲಿ ಹೆಚ್ಚಿನ ನೀರು ಹರಿದುಬಂದಿತ್ತು. ಈ ವೇಳೆ ದನವೊಂದು ಹೊಳೆಯ ಮಧ್ಯೆ ಸಿಲುಕಿ ಹಾಕಿಕೊಂಡಿತ್ತು. ಈ ವೇಳೆ ಗೃಹಪ್ರವೇಶ ಕಾರ್ಯ ಕ್ರಮಕ್ಕೆ ಬಂದಿದ್ದ ಯುವಕರ ತಂಡದ ಇಬ್ಬರು ಹೊಳೆಗೆ ಇಳಿದು ಹಗ್ಗದ ಮೂಲಕ ದನವನ್ನು ರಕ್ಷಿಸಿದ್ದಾರೆ.
ಈ ಕಾರ್ಯಕ್ಕೆ ಅವರ ಸ್ನೇಹಿತರಾದ ವಿನಯ್ ಸೂರ, ಹೇಮಂತ್ ಸೂರ, ನಿಶಾಂತ್ ನಾವೂರು, ರಂಜಿತ್, ಪ್ರಜ್ವಲ್, ಸುಮಂತ್ ಸಹಕರಿಸಿದ್ದಾರೆ.
Next Story