ಅಫ್ಘಾನಿಸ್ತಾನದಿಂದ ಮಂಗಳೂರಿಗೆ ಆಗಮಿಸಿದ ಐವರು ಕನ್ನಡಿಗರು
ಮಂಗಳೂರು: ಅಫ್ಘಾನಿಸ್ತಾನ ತಾಲಿಬಾನಿಗಳ ವಶವಾದ ನಂತರ ಅತಂತ್ರರಾಗಿದ್ದ ಭಾರತೀಯರನ್ನು ಏರ್ ಲಿಫ್ಟ್ ಮಾಡುವ ಕಾರ್ಯ ಪ್ರಗತಿಯಲ್ಲಿದ್ದು, ಸೋಮವಾರವೂ ಮಂಗಳೂರಿಗೆ ಐವರು ಕನ್ನಡಿಗರು ವಾಪಸಾಗಿದ್ದಾರೆ.
ತೊಕ್ಕೊಟ್ಟು ಮೂಲದ ಪ್ರಸಾದ್ ಆನಂದ ಬೆಳಗ್ಗೆಯೇ ಮಂಗಳೂರು ತಲುಪಿದ್ದರೆ, ಉಳಿದ ನಾಲ್ವರಾದ ಮೂಡಬಿದಿರೆಯ ಜಗದೀಶ್ ಪೂಜಾರಿ, ಬಜ್ಪೆಯ ದಿನೇಶ್ ರೈ, ಕಿನ್ನಿಗೋಳಿ ಪಕ್ಷಿಕೆರೆಯ ಡೆಸ್ಮಂಡ್ ಡೇವಿಡ್ ಡಿಸೋಜ, ಬಿಜೈನ ಶ್ರವಣ್ ಅಂಚನ್ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದಾರೆ.
ಕಾಬೂಲ್ ವಿಮಾನ ನಿಲ್ದಾಣದಿಂದ ಯುಎಸ್ಎ ಯುದ್ಧ ವಿಮಾನದಲ್ಲಿ ಏರ್ಲಿಫ್ಟ್ ಆದ ಈ ಐವರು ಖತರ್ಗೆ ತಲುಪಿದ್ದರು. ಅಲ್ಲಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ನಂತರ ಬೆಂಗಳೂರು ಕೊನೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ.
ಕಾಬೂಲ್ನಲ್ಲಿ ಏರ್ಲಿಫ್ಟ್ಗಾಗಿ ಕಾಯುತ್ತಿದ್ದ ಇವರನ್ನು ಆ.17ರಂದು ಖತರ್ನ ಭಾರತೀಯ ರಾಯಭಾರಿ ಕಚೇರಿಯು ಸುರಕ್ಷಿತವಾಗಿ ಏರ್ಲಿಫ್ಟ್ ಮಾಡಿದೆ.