ಕಬಕ : ಸರಕಾರಿ ಪ.ಪೂ.ಕಾಲೇಜು ಕೊಠಡಿ, ಶೌಚಾಲಯ ಕಾಮಗಾರಿಗೆ ಶಿಲಾನ್ಯಾಸ
ವಿಟ್ಲ ; ಕಬಕ ಸರಕಾರಿ ಪದವಿ ಪೂರ್ವ ಕಾಲೇಜು ಇದರ ಹೆಚ್ಚುವರಿ ಎರಡು ತರಗತಿ ಕೊಠಡಿ ಹಾಗೂ ಶೌಚಾಲಯ ಕಾಮಗಾರಿಗೆ ಪುತ್ತೂರು ಶಾಸಕ ಸಂಜೀವ ಮಠಂದೂರು ಶುಕ್ರವಾರ ಶಿಲಾನ್ಯಾಸಗೈದರು.
ಪ್ರಸ್ತುತ ಕಾಮಗಾರಿಯು ಕಾಲೇಜಿಗೆ ಅತೀ ಅಗತ್ಯ ವಾಗಿರುವುದನ್ನು ಮನಗಂಡ ಶಾಸಕ ಸಂಜೀವ ಮಠಂದೂರು ಅವರ ಶಿಫಾರಸ್ಸಿನ ಮೇರೆಗೆ ಸರ್ಕಾರವು ರೂ. 55 ಲಕ್ಷ ಅನುದಾನ ಬಿಡುಗಡೆ ಗೊಳಿಸಿತ್ತು.
ಶಿಲಾನ್ಯಾಸ ಸಂದರ್ಭದಲ್ಲಿ ಕಬಕ ಗ್ರಾಮ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಲ್ಲೇಗ, ಲೋಕೋಪಯೋಗಿ ಇಲಾಖೆಯ ಕಾರ್ಯ ನಿರ್ವಾಹಕ ಇಂಜಿನಿಯರ್ ರಾಜಾರಾಮ್, ಕಿರಿಯ ಇಂಜಿನಿಯರ್ ಬಾಲಕೃಷ್ಣ ಭಟ್, ಗುತ್ತಿಗೆದಾರ ಪ್ರಭಾಕರ ಎಂ.ಎನ್, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ರುಕ್ಮಯ್ಯ ಗೌಡ ಪೋಳ್ಯ, ಪ್ರೌಢಶಾಲಾ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಪುರುಷೋತ್ತಮ ಮಂಗ್ಲಿಮನೆ, ಪ್ರಭಾರ ಮುಖ್ಯ ಶಿಕ್ಷಕ ಶಫಿಯುಲ್ಲಾ, ಉಪನ್ಯಾಸ ಕರುಗಳಾದ ಶ್ರೀಧರ ರೈ, ವನಿತಾ, ವಿಜೇತ, ಬೋಧಕೇತರ ಸಿಬ್ಬಂದಿ ಮಮತಾ ಮೊದಲಾದವರು ಉಪಸ್ಥಿತರಿದ್ದರು.
ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಟಿ.ಎಸ್. ಭಟ್ ಸ್ವಾಗತಿಸಿ, ಪ್ರಾಂಶುಪಾಲೆ ಪ್ರೇಮಲತಾ ಜೆ.ರೈ ಪ್ರಸ್ತಾವನೆ ಗೈದರು. ಉಪನ್ಯಾಸಕರಾದ ನಂದಕುಮಾರಿ ವಂದಿಸಿ, ಚಂದ್ರಹಾಸ ರೈ ಕಾರ್ಯಕ್ರಮ ನಿರೂಪಿಸಿದರು.