ಕಾಸರಗೋಡು : ರಸ್ತೆ ಅಪಘಾತಕ್ಕೆ ಗಾಯಾಳು ಬಲಿ
ಕಾಸರಗೋಡು : ಬೈಕ್ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕುಂಬಳೆ ನಿವಾಸಿಯೋರ್ವರು ಶುಕ್ರವಾರ ಮೃತಪಟ್ಟಿದ್ದಾರೆ.
ಶಿರಿಯ ಬತ್ತೇರಿಯ ಮುಹಮ್ಮದ್ ( 53) ಮೃತಪಟ್ಟವರು.
ನಾಲ್ಕು ತಿಂಗಳ ಹಿಂದೆ ರಾಷ್ಟೀಯ ಹೆದ್ದಾರಿಯ ಮುಟ್ಟಂ ಗೇಟ್ ಬಳಿಕ ಇವರು ಸಂಚರಿಸುತ್ತಿದ್ದ ಬೈಕ್ ಗೆ ಇನ್ನೊಂದು ಬೈಕ್ ಢಿಕ್ಕಿ ಹೊಡೆದು ಅಪಘಾತ ನಡೆದಿತ್ತು . ಗಂಭೀರ ಗಾಯಗೊಂಡ ಮುಹಮ್ಮದ್ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು.
Next Story