ಕೊಲ್ಲೂರು: ಹೊಳೆಗೆ ಬಿದ್ದು ಕೃಷಿಕ ಮೃತ್ಯು
ಕೊಲ್ಲೂರು, ಸೆ.11: ಮಳೆಯಿಂದಾಗಿ ಕೃಷಿಕರೊಬ್ಬರು ಅಕಸ್ಮಿಕವಾಗಿ ನದಿಗೆ ಬಿದ್ದು ಕೊಚ್ಚಿಕೊಂಡು ಹೋಗಿ ಮೃತಪಟ್ಟ ಘಟನೆ ಮುದೂರು ಗ್ರಾಮದ ವಾಟೆಗುಂಡಿ ಎಂಬಲ್ಲಿ ನಡೆದಿದೆ.
ಮೃತರನ್ನು ವಾಟೆಗುಂಡಿ ನಿವಾಸಿ ಲಿಂಗಪ್ಪ ನಾಯ್ಕ(65) ಎಂದು ಗುರುತಿಸ ಲಾಗಿದೆ. ಇವರು, ಸೆ.10ರಂದು ಮಧ್ಯಾಹ್ನ ಹಿಂಡುಗಾನ ಹೊಳೆ ಬಳಿ ಇರುವ ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದು, ವಿಪರೀತ ಮಳೆಯಿಂದ ನೀರಿನ ಸೆಳತಕ್ಕೆ ಆಕಸ್ಮಿಕವಾಗಿ ಕಾಲು ಜಾರಿ ಕೊಚ್ಚಿಕೊಂಡು ಹೋಗಿ ನಾಪತ್ತೆಯಾಗಿದ್ದರು.
ಹುಡುಕಾಟ ನಡೆಸಿದಾಗ ಸೆ.11ರಂದು ಮಧ್ಯಾಹ್ನ 12.45ರ ಸುಮಾರಿಗೆ ಇವರ ಮೃತದೇಹವು ಮುದೂರು ಗ್ರಾಮದ ಹಿಂಡುಗಾಣ ನದಿಯ ಹೊಯಿಗೆ ಗುಂಡಿ ಎಂಬಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story