ಸೆ.16ರಂದು ತಂಬಾಕು ನಿಯಂತ್ರಣ ಕುರಿತು ವಿಚಾರ ಸಂಕಿರಣ
ಉಡುಪಿ, ಸೆ.15: ಮಣಿಪಾಲದ ಕೆಎಂಸಿ ಕಾಲೇಜಿನ ಸಮುದಾಯ ಔಷಧಾಲಯ ವಿಭಾಗದಿಂದ ಆನ್ಲೈನ್ (ಜೂಮ್ ಮೀಟಿಂಗ್) ಮೂಲಕ, ತಂಬಾಕು ನಿಯಂತ್ರಣದ ಮೇಲೆ ಅನ್ವಯಿಕ ಸಂಶೋಧನೆಯ ವಿಚಾರ ಸಂಕಿರಣ ಮತ್ತು ಪ್ರಾದೇಶಿಕ ಭಾಗಿದಾರರ ಸಭೆಯು ಸೆ.16ರಂದು ಅಪರಾಹ್ನ 1:30ರಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ.
ಮುಖ್ಯ ಅತಿಥಿಯಾಗಿ ರಾಜ್ಯದ ವೈದ್ಯಕೀಯ ಮತ್ತು ಕುಟುಂಬ ಕಲ್ಯಾಣ ವಿಭಾಗದ ಉಪನಿರ್ದೇಶಕ ಡಾ.ಎಂ. ಸೆಲ್ವರಾಜನ್ ಭಾಗವಹಿಸಲಿ ದ್ದಾರೆ. ಕೆಎಂಸಿಯ ಡೀನ್ ಡಾ.ಶರತ್ ಕೆ. ರಾವ್ ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಈಡೆನ್ಬರ್ಗ್ ವಿವಿಯ ಪ್ರೊ. ಜೆಫ್ ಕೊಲಿನ್ ಉಪನ್ಯಾಸ ನೀಡಲಿದ್ದಾರೆ. ಕೆಎಂಸಿಯ ಸಮುದಾಯ ಔಷಧಾಲಯ ವಿಭಾಗದ ಅಧ್ಯಕ್ಷೆ ಡಾ. ಸುಮಾ ನಾಯರ್, ಸಮುದಾಯ ಔಷಧಾಲಯ ವಿಭಾಗದ ಸಹ ಪ್ರಾಧ್ಯಾಪಕ ಡಾ. ಮುರಳಿಧರ್ ಎಂ. ಕುಲಕರ್ಣಿ ಭಾಗವಹಿಸಲಿ ದ್ದಾರೆ ಎಂದು ಸಂಘಟಕರ ಪ್ರಕಟಣೆ ತಿಳಿಸಿದೆ
Next Story