ಐಎಸ್ಎಫ್ ದಮಾಮ್ ಅಧ್ಯಕ್ಷರಾಗಿ ಮೀರಜ್ ಗುಲ್ಬರ್ಗಾ ಆಯ್ಕೆ
ದಮಾಮ್ : ಇಂಡಿಯನ್ ಸೋಶಿಯಲ್ ಫೋರಂ ದಮಾಮ್, ಕರ್ನಾಟಕ ಘಟಕದ ಅಧ್ಯಕ್ಷರಾಗಿ ಮೀರಜ್ ಗುಲ್ಬರ್ಗಾ ಆಯ್ಕೆಯಾಗಿದ್ದಾರೆ. ಸೆ.10ರಂದು ದಮಾಮ್ ನ ಉಮ್ಮು ಶಾಹಿಕ್ ಇಸ್ತಿರಾದಲ್ಲಿ ನಡೆದ ಮಹಾಸಭೆಯಲ್ಲಿ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.
ಈ ಹಿಂದಿನ ಪದಾಧಿಕಾರಿಗಳ ಅವಧಿ ಮುಕ್ತಾಯಗೊಳ್ಳುವುದರೊಂದಿಗೆ ಮೂರು ವರ್ಷಗಳ ಬಳಿಕ ನಡೆದ ಸಂಘಟನೆಯ ಚುನಾವಣೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಸಭೆಯಲ್ಲಿ ಸಂಘಟನೆಯ ಕಳೆದ ಮೂರು ವರ್ಷಗಳ ಚಟುವಟಿಕೆಯ ಕುರಿತು ಅವಲೋಕನ ಮಾಡಲಾಯಿತು.
ಪ್ರಧಾನ ಕಾರ್ಯದರ್ಶಿಯಾಗಿ ಇರ್ಶಾದ್ ಪಿಲಾರ್, ಉಪಾಧ್ಯಕ್ಷರಾಗಿ ಶರೀಫ್ ಅಡ್ಡೂರು ಹಾಗೂ ಡಾ. ಸಜ್ಜಾದ್ ಬೆಂಗಳೂರು ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಗಳಾಗಿ ಶರೀಫ್ ಕೃಷ್ಣಾಪುರ, ಝಫರ್ ಬೆಂಗಳೂರು ಮತ್ತು ಸಾದಿಕ್ ಗುಲ್ಬರ್ಗಾ ಆಯ್ಕೆಯಾಗಿದ್ದಾರೆ.
ರಾಜ್ಯ ಕ್ರಿಯಾ ಸಮಿತಿ ಸದಸ್ಯರಾಗಿ ಸಲಾಹುದ್ದೀನ್ ಮೈಸೂರು, ಆರಿಫ್ ಜೋಕಟ್ಟೆ, ಇಕ್ಬಾಲ್ ಬಿಜಾಪುರ, ಇಮ್ರಾನ್ ಕಾಟಿಪಳ್ಳ, ಇಬ್ರಾಹೀಂ ಪಡುಬಿದ್ರೆ, ಸಾಜಿದ್ ವಳವೂರು, ಸಿರಾಜುದ್ದೀನ್ ರಾಯಚೂರು ಹಾಗೂ ಮುಹಮ್ಮದ್ ಅಲಿ ಮೂಳೂರು ಆಯ್ಕೆಯಾಗಿದ್ದಾರೆ.