ಇಮಾಂ, ಮೌಝಿನ್ರ ಗಮನಕ್ಕೆ
ಉಡುಪಿ : ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಿಂದ ಗೌರವಧನ ಪಡೆಯುತ್ತಿರುವ ಇಮಾಂ ಮತ್ತು ಮೌಝಿನ್ರವರು ತಮ್ಮ ಬ್ಯಾಂಕ್ ಖಾತೆಗೆ ತಮ್ಮ ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಜೋಡಿಸಿ ಎಓನ್ಪಿಸಿಐ ತಂತ್ರಾಂಶದಲ್ಲಿ ಆಳವಡಿಸಿಕೊಂಡರೆ ಮಾತ್ರ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ ಮೂಲಕ ಖಾತೆಗೆ ಹಣ ವರ್ಗಾವಣೆಯಾಗುತ್ತದೆ ಎಂದು ಉಡುಪಿ ಜಿಲ್ಲಾ ವಕ್ಫ್ ಅಧಿಕಾರಿ ತಿಳಿಸಿದ್ದಾರೆ.
ಆದುದರಿಂದ ಜಿಲ್ಲೆಯ ವಕ್ಫ್ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ ಈಗಾಗಲೇ ಗೌರವ ಧನ ಪಡೆಯುತ್ತಿರುವ ಇಮಾಮ್ ಮೌಝಿನ್ರವರು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಜೋಡಿಸಿ ಎನ್ಪಿಸಿಐ ತಂತ್ರಾಂಶದಲ್ಲಿ ಅಳವಡಿಸಿಕೊಂಡು ಮಾಹಿತಿ ಯನ್ನು ಜಿಲ್ಲಾ ವಕ್ಫ್ ಕಚೇರಿಗೆ ಕೂಡಲೇ ತಿಳಿಸಬೇಕು. ತಂತ್ರಾಂಶದಲ್ಲಿ ಆಳವಡಿಕೆ ಯಾಗದೆ ಇರುವ ಖಾತೆಗೆ ತಾಂತ್ರಿಕ ದೋಷದಿಂದ ಹಣ ಜಮೆಯಾಗದೆ ಇದ್ದಲ್ಲಿ ತಾವೇ ನೇರ ಹೊಣೆಗಾರರಾಗುತ್ತೀರಿ ಎಂದು ಜಿಲ್ಲಾ ವಕ್ಫ್ ಅಧಿಕಾರಿ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.
Next Story