ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾಗಿ ಜಯ ಕೋಟ್ಯಾನ್ ಪುನರಾಯ್ಕೆ
ಜಯ ಕೋಟ್ಯಾನ್
ಉಡುಪಿ, ಸೆ.19: ಮೊಗವೀರ ಸಮಾಜದ ಸರ್ವೋಚ್ಚ ಸಂಘಟನೆ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಉಚ್ಚಿಲ ಇದರ ಮುಂದಿನ ಮೂರು ವರ್ಷದ ಅವಧಿಗೆ ಆಡಳಿತ ಮಂಡಳಿಗೆ ಅಧ್ಯಕ್ಷರಾಗಿ ಜಯ ಸಿ.ಕೋಟ್ಯಾನ್ ೆಳ್ಳಂಪಳ್ಳಿ ಪುನರಾಯ್ಕೆಗೊಂಡಿದ್ದಾರೆ.
ಉಪಾಧ್ಯಕ್ಷರಾಗಿ ಸುಭಾಸ್ಚಂದ್ರ ಕಾಂಚನ್ ಬೋಳಾರ್, ಪ್ರಧಾನ ಕಾರ್ಯ ದರ್ಶಿಯಾಗಿ ಸುಧಾಕರ ಕುಂದರ್ ಮಲ್ಪೆ, ಜತೆ ಕಾರ್ಯದರ್ಶಿಯಾಗಿ ಮೋಹನ್ ಕರ್ಕೇರ ತೋನ್ಸೆ, ಕೋಶಾಧಿಕಾರಿಯಾಗಿ ಭರತ್ ಎರ್ಮಾಳ್, ದೇವಳದ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷರಾಗಿ ವಾಸುದೇವ ಸಾಲ್ಯಾನ್ ಕಟಪಾಡಿ ನೇಮಕಗೊಂಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Next Story