ಸೆ. 21ರಂದು ಸಂಜೀವಿನಿ ವಾರದ ಸಂತೆ ಉದ್ಘಾಟನೆ
ಉಡುಪಿ, ಸೆ.20: ಉಡುಪಿ ಜಿಪಂ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾ ಯತ್ರಾಜ್ ಇಲಾಖೆ, ತಾಪಂ, ತೆಂಕನಿಡಿಯೂರು, ಕೆಮ್ಮಣ್ಣು ಬಡಾನಿಡಿ ಯೂರು, ಕಲ್ಯಾಣಪುರ ಗ್ರಾಪಂಗಳ ಮಹಿಳಾ ಸ್ವಸಹಾಯ ಸಂಜೀವಿನಿ ಒಕ್ಕೂಟದ ವತಿಯಿಂದ ಸಂಜೀವಿನಿ ವಾರದ ಸಂತೆಯು ಪ್ರತಿ ಮಂಗಳವಾರ ಬೆಳಗ್ಗೆ 10ರಿಂದ ಮದ್ಯಾಹ್ನ 1ಗಂಟೆವರೆಗೆ ತೆಂಕನಿಡಿಯೂರು ಗ್ರಾಪಂನ ಸಮುದಾಯ ಭವನದಲ್ಲಿ ನಡೆಯಲಿದೆ.
ಸಂತೆಯನ್ನು ಸೆ.21ರಂದು ಬೆಳಿಗ್ಗೆ 10ಗಂಟೆಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ಉದ್ಘಾಟಿಸಲಿರುವರು ಎಂದು ಉಡುಪಿ ಎನ್ಆರ್ಎಲ್ಎಂ ಜಿಲ್ಲಾ ಕಾರ್ಯ ಕ್ರಮ ವ್ಯವಸ್ಥಾಪಕ ಪ್ರಭಾಕರ ಆಚಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story