ಮಂಗಳೂರು: ಹಾಫಿಝ್ ವಿದ್ಯಾರ್ಥಿಗಳಿಗೆ ಸನದು ಪ್ರದಾನ
ಮಂಗಳೂರು, ಸೆ.24: ನಗರದ ಬಂದರ್ ಮಸ್ಜಿದ್ ಝೀನತ್ ಬಕ್ಷ್ ಹಾಗೂ ಈದ್ಗಾ ಮಸೀದಿಯ ಆಡಳಿತ ಸಮಿತಿಯ ಅಧೀನದಲ್ಲಿರುವ ಅಶ್ಶೈಕ್ ಅಸೈಯದ್ ಜಲಾಲುದ್ದೀನ್ ಮುಹಮ್ಮದ್ ಮೌಲಾ ಹಿಫ್ಳುಲ್ ಖುರ್ಆನ್ ಕಾಲೇಜಿನಲ್ಲಿ ಕುರ್ಆನ್ ಸಂಪೂರ್ಣ ಕಂಠಪಾಠ ಮಾಡಿದ 24 ಹಾಫಿಝ್ ವಿದ್ಯಾರ್ಥಿಗಳಿಗೆ ಸನದು ಪ್ರದಾನ ಕಾರ್ಯಕ್ರಮವು ಗುರುವಾರ ಕಾಲೇಜ್ ಸಭಾಂಗಣದಲ್ಲಿ ನಡೆಯಿತು.
ಮಸೀದಿಯ ಖತೀಬ್ ಅಲ್ಹಾಜ್ ಅಬುಲ್ ಅಕ್ರಂ ಮುಹಮ್ಮದ್ ಬಾಖವಿ ದುಆಗೈದು ಕಾರ್ಯಕ್ರಮ ಉಧ್ಘಾಟಿಸಿದರು.ಬಳಿಕ ಅವರು ಸನದು ಪ್ರದಾನ ಮಾಡಿದರು. ಮಸೀದಿಯ ಅಧ್ಯಕ್ಷ ಹಾಜಿ ವೈ.ಅಬ್ದುಲ್ಲ ಕುಂಞಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪಾಧ್ಯಕ್ಷ ಅಶ್ರಫ್ ಕೆ, ಕಾರ್ಯಕಾರಿ ಸಮಿತಿ ಸದಸ್ಯ ಹಾಜಿ ಎಸ್ಎಂ ರಶೀದ್ ಹಾಜಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ಹನೀಫ್ ಸ್ವಾಗತಿಸಿದರು.
ಹಿಫ್ಳುಲ್ ಖುರ್ಆನ್ ಕಾಲೇಜಿನ ಉಪನ್ಯಾಸಕ ಮುಹಮ್ಮದ್ ಅಝ್ಹರುದ್ದೀನ್ ಅನ್ಸಾರಿ ಪ್ರಾಸ್ತಾವಿಕ ಭಾಷಣಗೈದರು. ಮಸೀದಿಯ ಕೋಶಾಧಿಕಾರಿ ಹಾಜಿ ಸೈಯದ್ ಅಹ್ಮದ್ ಬಾಷಾ ತಂಙಳ್, ಆಡಳಿತ ಸಮಿತಿ ಸದಸ್ಯರಾದ ಮುಹಮ್ಮದ್ ಅಶ್ರಫ್, ಹಾಜಿ ಅಬ್ದುಲ್ ಸಮದ್, ಅದ್ದು ಹಾಜಿ ಮತ್ತಿತರರು ಉಪಸ್ಥಿತರಿದ್ದರು.