ಮಲ್ಪೆ; ಕಲ್ಲಿಗೆ ಡಿಕ್ಕಿ ಹೊಡೆದು ಬೋಟು ಮುಳುಗಡೆ
ಮಲ್ಪೆ, ಸೆ. 25: ಮೀನುಗಾರಿಕೆ ನಡೆಸಿ ವಾಪಾಸು ಬರುತ್ತಿದ್ದ ಬೋಟೊಂದು ಮಲ್ಪೆ ಬಂದರಿನ ಅಳಿವೆ ಬಾಗಿಲಿನ ಬಳಿ ಎಂಜಿನ್ ಕೆಟ್ಟು ಹೋಗಿ ಕಲ್ಲಿಗೆ ಡಿಕ್ಕಿ ಹೊಡೆದು ಮುಳುಗಡೆಗೊಂಡ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಉದ್ಯಾವರ ಪಿತ್ರೋಡಿಯ ಅಶ್ವತ್ ಕುಮಾರ್ ಎಂಬವರಿಗೆ ಸೇರಿದ ದತ್ತಾತ್ರೆಯ ಹೆಸರಿನ ಬೋಟು, ಶುಕ್ರವಾರ ಮುಂಜಾನೆ 4 ಗಂಟೆಗೆ ಧರ್ಮ ಕುಂದರ್ ಎಂಬವರ ಮಾಲಕತ್ವದ ಶ್ರೀ ದತ್ತಾತ್ರೆಯ ಬೋಟ್ನೊಂದಿಗೆ ಸಹ ಬೋಟ್ ಆಗಿ(ಕ್ಯಾರಿಯರ್) ಮೀನುಗಾರಿಕೆಗೆ ತೆರಳಿತ್ತು.
ಸಮುದ್ರದಲ್ಲಿ ಮೀನುಗಾರಿಕೆ ಮುಗಿಸಿ ರಾತ್ರಿ 8 ಗಂಟೆಗೆ ಮಲ್ಪೆ ಬಂದರಿಗೆ ವಾಪಾಸ್ಸು ಬರುತ್ತಿದ್ದಾಗ ಬೋಟಿನ ಎಂಜಿನ್ ಕೆಟ್ಟು ನಿಯಂತ್ರಣ ತಪ್ಪಿ ಕಲ್ಲಿಗೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಬೋಟು ಸಂಪೂರ್ಣ ಹಾನಿ ನೀರಿನಲ್ಲಿ ಮುಳುಗಡೆಯಾಗಿದೆ ಎಂದು ದೂರಲಾಗಿದೆ. ಬೋಟಿ ನಲ್ಲಿದ್ದ ನಾಲ್ವರು ಮೀನು ಗಾರರನ್ನು ಸಮೀಪದಲ್ಲಿದ್ದ ಶ್ರೀದತ್ತಾತ್ರೆಯ ಬೋಟಿನವರು ರಕ್ಷಿಸಿದ್ದಾರೆ. ಸುಮಾರು 26 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
Next Story